ಬಂಟ್ವಾಳದಲ್ಲಿ ಬಿರುಗಾಳಿ-ಮಳೆಗೆ ಇನ್ನಷ್ಟು ಹಾನಿ ಪ್ರಕರಣಗಳು ವರದಿ - Karavali Times ಬಂಟ್ವಾಳದಲ್ಲಿ ಬಿರುಗಾಳಿ-ಮಳೆಗೆ ಇನ್ನಷ್ಟು ಹಾನಿ ಪ್ರಕರಣಗಳು ವರದಿ - Karavali Times

728x90

9 April 2025

ಬಂಟ್ವಾಳದಲ್ಲಿ ಬಿರುಗಾಳಿ-ಮಳೆಗೆ ಇನ್ನಷ್ಟು ಹಾನಿ ಪ್ರಕರಣಗಳು ವರದಿ

ಬಂಟ್ವಾಳ, ಎಪ್ರಿಲ್ 09, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಮಂಗಳವಾರ ಬೀಸಿದ ಬಿರುಗಾಳಿ ಹಾಗೂ ಮಳೆಗೆ ಇನ್ನಷ್ಟು ಹಾನಿ ಪ್ರಕರಣಗಳು ವರದಿಯಾಗಿವೆ. ಬಡಗ ಕಜೆಕಾರು ಗ್ರಾಮದ ನಿವಾಸಿ ಜಯೇಂದ್ರ ಇಂದ್ರ ಅವರ ಮನೆಯು ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದೆ. ತೆಂಕ ಕಜೆಕಾರು ಗ್ರಾಮದ ಪ್ರೇಮ ಸುಂದರ್ ಮೂಲ್ಯ ಅವರ ಅಡಿಕೆ ತೋಟಕ್ಕೆ ಗಾಳಿ ಮಳೆಯಿಂದ ಹಾನಿ ಸಂಭವಿಸಿದೆ. ಮಣಿನಾಲ್ಕೂರು ಗ್ರಾಮದ ನಡುಮೊಗರು ನಿವಾಸಿ ಸಂಪತ್ ಕುಮಾರ್ ಶೆಟ್ಟಿ ಅವರ ತೋಟದ ಅಡಿಕೆ ಮರಗಳು ಗಾಳಿ ಮಳೆಗೆ ಹಾನಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಬಿರುಗಾಳಿ-ಮಳೆಗೆ ಇನ್ನಷ್ಟು ಹಾನಿ ಪ್ರಕರಣಗಳು ವರದಿ Rating: 5 Reviewed By: karavali Times
Scroll to Top