ಬಂಟ್ವಾಳ, ಎಪ್ರಿಲ್ 15, 2025 (ಕರಾವಳಿ ಟೈಮ್ಸ್) : ತಾಲೂಕಿನ ವಿವಿಧೆಡೆ ಕಳೆದ ಕೆಲ ದಿನಗಳಿಂದ ಚದುರಿದಂತೆ ಗಾಳಿ-ಮಳೆಯಾಗುತ್ತಿದ್ದು, ಮಳೆ ಹಾನಿ ಘಟನೆಗಳು ವರದಿಯಾಗಿದೆ. ಸಂಗಬೆಟ್ಟು ಗ್ರಾಮದ ಬೋರುಗುಡ್ಡೆ ನಿವಾಸಿ ನೀಲಯ ನಾಯ್ಕ್ ಬಿನ್ ಈಶ್ವರ್ ನಾಯ್ಕ್ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ನಿವಾಸಿಗಳಾದ ದಿವಾಕರ್ ನಾಯಕ್ ಬಿನ್ ಗೋವಿಂದ ನಾಯಕ್ ಹಾಗೂ ರವೀಂದ್ರ ನಾಯಕ್ ಬಿನ್ ಗೋವಿಂದ ನಾಯಕ್ ಅವರುಗಳ ಅಡಿಕೆ ತೋಟಗಳಿಗೆ ಭಾಗಶಃ ಹಾನಿಯಾಗಿದೆ.
15 April 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment