ವಿಟ್ಲದಲ್ಲಿ ಗಣಿಗಾರಿಕೆಗೆ ದಾಸ್ತಾನಿರಿಸಿದ್ದ ಸ್ಫೋಟಕಗಳು ಬ್ಲಾಸ್ಟ್ : ಮನೆಗಳು, ಮರ-ಗಿಡಗಳಿಗೆ ಹಾನಿ - Karavali Times ವಿಟ್ಲದಲ್ಲಿ ಗಣಿಗಾರಿಕೆಗೆ ದಾಸ್ತಾನಿರಿಸಿದ್ದ ಸ್ಫೋಟಕಗಳು ಬ್ಲಾಸ್ಟ್ : ಮನೆಗಳು, ಮರ-ಗಿಡಗಳಿಗೆ ಹಾನಿ - Karavali Times

728x90

5 March 2025

ವಿಟ್ಲದಲ್ಲಿ ಗಣಿಗಾರಿಕೆಗೆ ದಾಸ್ತಾನಿರಿಸಿದ್ದ ಸ್ಫೋಟಕಗಳು ಬ್ಲಾಸ್ಟ್ : ಮನೆಗಳು, ಮರ-ಗಿಡಗಳಿಗೆ ಹಾನಿ

 ಬಂಟ್ವಾಳ, ಮಾರ್ಚ್ 05, 2025 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿನ ಕಲ್ಲಿನ ಕೋರೆಯಲ್ಲಿ ಗಣಿಗಾರಿಕೆ ನಡೆಸಲು ತಂದು ದಾಸ್ತಾನಿರಿಸಿದ್ದ ಸ್ಫೋಟಕಗಳು ಬಿಸಿಲಿನ ತಾಪಕ್ಕೆ ಸ್ಫೋಟಗೊಂಡು ಮನೆಗಳು, ಮರ-ಗಿಡಗಳು ಹಾನಿಗೊಂಡ ಘಟನೆ ಬುಧವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. 

ಬುಧವಾರ ಮಧ್ಯಾಹ್ನ ವೇಳೆಗೆ ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿರುವ ಎನ್ ಎಸ್ ಕೋರೆಯ ಗಣಿಗಾರಿಕೆಗಾಗಿ ಬೇಕಾಗಿರುವ ಅಪಾಯಕಾರಿಯಾದ ಸ್ಪೋಟಕಗಳನ್ನು ಬಂಟ್ವಾಳದ ಶ್ರೀ ರಾಮ್ ಕನ್‍ಸ್ಟ್ಟ್ರಕ್ಷನ್ ಇದರ ಅಶೋಕ ಮತ್ತು ಅದರ ಬ್ಲಾಸ್ಟರ್ ಕೆಲಸ ಮಾಡುತ್ತಿದ್ದಾತ, ಮಾಡತ್ತಡ್ಕ ಎಂಬಲ್ಲಿರುವ ಎನ್ ಎಸ್ ಕೋರೆಯ ಬಳಿಯಿರುವ ಮೋನಪ್ಪ ಪೂಜಾರಿ ಅವರ ಬಾಬ್ತು ಜಾಗದಲ್ಲಿರುವ ಕಲ್ಲು ಬಂಡೆಗಳ ಮೇಲೆ ಯಾವುದೇ ಮುಂಜಾಗ್ರತಾ ಕ್ರಮ ಹಾಗೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಮತ್ತು ಬೇಜವಾಬ್ದಾರಿಯಿಂದ ಇಟ್ಟಿದ್ದರು. ಈ ಸ್ಪೋಟಕಗಳು ಬಿಸಿಲಿನ ತಾಪದಿಂದ ಸ್ಪೋಟಗೊಂಡು ಸುತ್ತಮುತ್ತಲಿನ ಮರಗಿಡಗಳು ಛಿದ್ರಗೊಂಡಿರುತ್ತದೆ ಹಾಗೂ ಪರಿಸರದ ಈಶ್ವರ ನಾಯ್ಕ ಮತ್ತು ವಸಂತ ಮೋಹನ ಎಂಬವರುಗಳ ಮನೆಗಳಿಗೆ ಹಾನಿಯಾಗಿರುತ್ತದೆ, ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2025 ಕಲಂ 9ಬಿ ಸ್ಪೋಟಕ ಕಾಯ್ದೆ 1884 ಮತ್ತು 288 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲದಲ್ಲಿ ಗಣಿಗಾರಿಕೆಗೆ ದಾಸ್ತಾನಿರಿಸಿದ್ದ ಸ್ಫೋಟಕಗಳು ಬ್ಲಾಸ್ಟ್ : ಮನೆಗಳು, ಮರ-ಗಿಡಗಳಿಗೆ ಹಾನಿ Rating: 5 Reviewed By: lk
Scroll to Top