ಬಿ.ಸಿ.ರೋಡು : ಬೇಡಿಕೆ ಈಡೇರಿಕೆ ಆಗ್ರಹಿಸಿ 2ನೇ ದಿನವೂ ಹೋರಾಟ ಮುಂದುವರೆಸಿದ ಅಕ್ಷರ ದಾಸೋಹ ನೌಕರರು - Karavali Times ಬಿ.ಸಿ.ರೋಡು : ಬೇಡಿಕೆ ಈಡೇರಿಕೆ ಆಗ್ರಹಿಸಿ 2ನೇ ದಿನವೂ ಹೋರಾಟ ಮುಂದುವರೆಸಿದ ಅಕ್ಷರ ದಾಸೋಹ ನೌಕರರು - Karavali Times

728x90

6 March 2025

ಬಿ.ಸಿ.ರೋಡು : ಬೇಡಿಕೆ ಈಡೇರಿಕೆ ಆಗ್ರಹಿಸಿ 2ನೇ ದಿನವೂ ಹೋರಾಟ ಮುಂದುವರೆಸಿದ ಅಕ್ಷರ ದಾಸೋಹ ನೌಕರರು

ಬಂಟ್ವಾಳ, ಮಾರ್ಚ್ 06, 2025 (ಕರಾವಳಿ ಟೈಮ್ಸ್) : ಅಕ್ಷರ ದಾಸೋಹ ನೌಕರರಿಗೆ ರಾಜ್ಯ ಸರಕಾರ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದ 6 ಸಾವಿರ ರೂಪಾಯಿ ವೇತನ ಹೆಚ್ಚಳ ಸಹಿತ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ (ಎಐಸಿಸಿಟಿಯು) ವತಿಯಿಂದ   ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗ ಹಮ್ಮಿಕೊಂಡ ಪ್ರತಿಭಟನೆ ಎರಡನೇ ದಿನವಾದ ಬುಧವಾರವೂ ಸಂಜೆವರೆಗೆ ಮುಂದುವರಿಯಿತು. ಅಕ್ಷರ ದಾಸೋಹ ಯೋಜನೆ ತಾಲೂಕು ಅಧಿಕಾರಿ ನೋಣಯ್ಯ ನಾಯ್ಕ್ ಅವರ ಮುಖಾಂತರ ಇದೇ ವೇಳೆ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಐಸಿಸಿಟಿಯು ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷ ಕಾಮ್ರೆಡ್ ರಾಮಣ್ಣ ವಿಟ್ಲ ಅವರು, ಬೇಡಿಕೆ ಈಡೇರದೆ ಇದ್ದಲ್ಲಿ ಪ್ರತಿಭಟನೆ ಇನ್ನಷ್ಟು ಕಾಲ ಮುಂದುವರಿಯಲಿದೆ ಎಂದರು. 

ಎಐಸಿಸಿಟಿಯು ಪ್ರಮುಖ ಕಾಮ್ರೆಡ್ ಸುಲೈಮಾನ್ ಕೆಳಿಂಜ, ಅಕ್ಷರ ದಾಸೋಹ ಸಂಘಟನೆಯ ತಾಲೂಕು ಅದ್ಯಕ್ಷೆ ಜಯಶ್ರೀ ಆರ್ ಕೆ, ಕಾರ್ಯದರ್ಶಿ ವಾಣಿಶ್ರೀ ಕನ್ಯಾನ, ಉಪಾದ್ಯಕ್ಷರುಗಳಾದ ವಿನಯ ನಡುಮೊಗರು, ಸೇವಂತಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಬೇಡಿಕೆ ಈಡೇರಿಕೆ ಆಗ್ರಹಿಸಿ 2ನೇ ದಿನವೂ ಹೋರಾಟ ಮುಂದುವರೆಸಿದ ಅಕ್ಷರ ದಾಸೋಹ ನೌಕರರು Rating: 5 Reviewed By: karavali Times
Scroll to Top