ಬಡಕಬೈಲು ಸಮೀಪ ಅಟೋ ರಿಕ್ಷಾ ಉರುಳಿ ಬಿದ್ದು ಚಾಲಕ ಮೃತ್ಯು, ಮೂವರು ಮಕ್ಕಳಿಗೆ ಗಾಯ - Karavali Times ಬಡಕಬೈಲು ಸಮೀಪ ಅಟೋ ರಿಕ್ಷಾ ಉರುಳಿ ಬಿದ್ದು ಚಾಲಕ ಮೃತ್ಯು, ಮೂವರು ಮಕ್ಕಳಿಗೆ ಗಾಯ - Karavali Times

728x90

14 February 2025

ಬಡಕಬೈಲು ಸಮೀಪ ಅಟೋ ರಿಕ್ಷಾ ಉರುಳಿ ಬಿದ್ದು ಚಾಲಕ ಮೃತ್ಯು, ಮೂವರು ಮಕ್ಕಳಿಗೆ ಗಾಯ

 ಬಂಟ್ವಾಳ, ಫೆಬ್ರವರಿ 15, 2025 (ಕರಾವಳಿ ಟೈಮ್ಸ್) : ಚಾಲಕನ ನಿಯಂತ್ರಣ ಮೀರಿ ಅಟೋ ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದು ಚಾಲಕ ಮೃತಪಟ್ಟು, ಸಹಪ್ರಯಾಣಿಕರಾಗಿದ್ದ ಮೂವರು ಮಕ್ಕಳು ಗಾಯಗೊಂಡ ಘಟನೆ ಅಮ್ಮುಂಜೆ ಗ್ರಾಮದ ಬಡಕಬೈಲು ಸಮೀಪದ ಗಾಣೆಮಾರ್ ಎಂಬಲ್ಲಿ ಶುಕ್ರವಾರ ಮಧ್ಯ ರಾತ್ರಿ ವೇಳೆ ಸಂಭವಿಸಿದೆ.

ಮೃತ ಅಟೋ ರಿಕ್ಷಾ ಚಾಲಕನನ್ನು ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ (37) ಎಂದು ಹೆಸರಿಸಲಾಗಿದ್ದು, ಗಾಯಾಳುಗಳನ್ನು ಚಾಲಕನ ಸಂಬಂಧಿ ಮಕ್ಕಳಾದ ತುಷಾರ್, ಭವಿತ್ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ. ಇವರು ಮೂಡಬಿದರೆಯ ಮಿಜಾರು ಎಂಬಲ್ಲಿ ನಡೆಯುತ್ತಿರುವ ಜಾತ್ರೆಗೆ ಹೋಗಿ ವಾಪಸು ಮನೆಗೆ ಬರುವ ವೇಳೆ ಮನೆಗೆ ಸುಮಾರು 500 ಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ.

 ಚಾಲಕನ ನಿಯಂತ್ರಣ ‌ಕಳೆದ ರಿಕ್ಷಾ ತಲೆಕೆಳಗಾದ ಸ್ಥಿತಿಯಲ್ಲಿ ಚರಂಡಿಗೆ ಬಿದ್ದಿದೆ. ಚಾಲಕ ರಿಕ್ಷಾದ ಅಡಿಯಲ್ಲಿ ಸಿಲುಕಿ ಸ್ಥಳದಲ್ಲಿಯೇ ‌ಮೃತಪಟ್ಟರೆ ಉಳಿದಂತೆ ರಿಕ್ಷಾದಲ್ಲಿ ಪ್ರಯಾಣಿಕರಾದ ಮೂವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

   ಈ ಬಗ್ಗೆ ಬಂಟ್ವಾಳ ಸಂಚಾರಿ ಪೋಲಿಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಡಕಬೈಲು ಸಮೀಪ ಅಟೋ ರಿಕ್ಷಾ ಉರುಳಿ ಬಿದ್ದು ಚಾಲಕ ಮೃತ್ಯು, ಮೂವರು ಮಕ್ಕಳಿಗೆ ಗಾಯ Rating: 5 Reviewed By: lk
Scroll to Top