ತಲಪಾಡಿ : ಭೀಕರ ಅಪಘಾತಕ್ಕೀಡಾದ 2 ದಿನದ ಹಿಂದೆ ವಿವಾಹಿತರಾಗಿದ್ದ ನವದಂಪತಿ ಸಂಚರಿಸುತ್ತಿದ್ದ ಕಾರು : ಪತ್ನಿ ಸ್ಪಾಟ್ ಡೆತ್, ಪತಿ ಗಂಭೀರ - Karavali Times ತಲಪಾಡಿ : ಭೀಕರ ಅಪಘಾತಕ್ಕೀಡಾದ 2 ದಿನದ ಹಿಂದೆ ವಿವಾಹಿತರಾಗಿದ್ದ ನವದಂಪತಿ ಸಂಚರಿಸುತ್ತಿದ್ದ ಕಾರು : ಪತ್ನಿ ಸ್ಪಾಟ್ ಡೆತ್, ಪತಿ ಗಂಭೀರ - Karavali Times

728x90

7 September 2024

ತಲಪಾಡಿ : ಭೀಕರ ಅಪಘಾತಕ್ಕೀಡಾದ 2 ದಿನದ ಹಿಂದೆ ವಿವಾಹಿತರಾಗಿದ್ದ ನವದಂಪತಿ ಸಂಚರಿಸುತ್ತಿದ್ದ ಕಾರು : ಪತ್ನಿ ಸ್ಪಾಟ್ ಡೆತ್, ಪತಿ ಗಂಭೀರ

ಬಂಟ್ವಾಳ, ಸೆಪ್ಟೆಂಬರ್ 07, 2024 (ಕರಾವಳಿ ಟೈಮ್ಸ್) : 2 ದಿನಗಳ ಹಿಂದೆಯಷ್ಟೆ ವಿವಾಹಿತರಾಗಿದ್ದ ನವ ದಂಪತಿ ಸಂಚರಿಸುತ್ತಿದ್ದ ಕಾರೊಂದು ಬಿ ಸಿ ರೋಡು ಸಮೀಪದ ತಲಪಾಡಿ ಎಂಬಲ್ಲಿ ಭೀಕರ ಅಪಘಾತಕ್ಕೀಡಾಗಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಬಂಟ್ವಾಳ ತಾಲೂಕು, ಕೆದಿಲ ಗ್ರಾಮದ ಪೇರಮೊಗ್ರು ಸಮೀಪದ ಸತ್ತಿಕಲ್ಲು ನಿವಾಸಿ ರವೀಂದ್ರ ಭಟ್ ಅವರ ಪುತ್ರ ಅನೀಶ್ ಕೃಷ್ಣ (30) ಎಂಬವರು ಸೆಪ್ಟೆಂಬರ್ 5 ರಂದು ಮಾನಸ ಎಂಬ ನವ ವಧುವಿನೊಂದಿಗೆ ವಿವಾಹಿತರಾಗಿದ್ದು, ವಿವಾಹದ ಲೆಕ್ಕಾಚಾರಗಳು ಮುಗಿಯುವುದಕ್ಕಿಂತ ಮುಂಚೆಯೇ ಈ ಭೀಕರ ಅಪಘಾತ ಸಂಭವಿಸಿದ್ದು, ಪತ್ನಿ ಮಾನಸ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರೆ, ಪತಿ ಅನೀಶ್ ಕೃಷ್ಣ ಅವರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 

ಬಿ ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ ಅನೀಶ್ ಕೃಷ್ಣ ಹಾಗೂ ಪತ್ನಿ ಮಾನಸ ಅವರು ಪ್ರಯಾಣಿಸುತ್ತಿದ್ದ ಆಲ್ಟೋ ಕಾರು ಬಿ ಸಿ ರೋಡು ಸಮೀಪದ ತಲಪಾಡಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ಮೀರಿ ಹೆದ್ದಾರಿಯ ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಬದಿಗೆ ಎಸೆಯಲ್ಪಟ್ಟು ಮಂಗಳೂರು ಕಡೆಯಿಂದ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ.

ಅಪಘಾತ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಪತ್ನಿ ಮಾನಸ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಕಾರಿನೊಳಗೆ ಸಿಲುಕಿ ಗಂಭೀರ ಗಾಯಗೊಂಡ ಅನೀಶ್ ಅವರನ್ನು ಸ್ಥಳೀಯರು ಹೊರಗೆಳೆದು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೆÇೀಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ತಲಪಾಡಿ : ಭೀಕರ ಅಪಘಾತಕ್ಕೀಡಾದ 2 ದಿನದ ಹಿಂದೆ ವಿವಾಹಿತರಾಗಿದ್ದ ನವದಂಪತಿ ಸಂಚರಿಸುತ್ತಿದ್ದ ಕಾರು : ಪತ್ನಿ ಸ್ಪಾಟ್ ಡೆತ್, ಪತಿ ಗಂಭೀರ Rating: 5 Reviewed By: karavali Times
Scroll to Top