ತ್ಯಾಜ್ಯ ವಿಲೇವಾರಿ : ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಯಾದ ಮರುದಿನವೇ ಫೀಲ್ಡಿಗಿಳಿದು ಪರಿಶೀಲಿಸಿದ ಅಧ್ಯಕ್ಷ ವಾಸು ಪೂಜಾರಿ - Karavali Times ತ್ಯಾಜ್ಯ ವಿಲೇವಾರಿ : ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಯಾದ ಮರುದಿನವೇ ಫೀಲ್ಡಿಗಿಳಿದು ಪರಿಶೀಲಿಸಿದ ಅಧ್ಯಕ್ಷ ವಾಸು ಪೂಜಾರಿ - Karavali Times

728x90

19 September 2024

ತ್ಯಾಜ್ಯ ವಿಲೇವಾರಿ : ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಯಾದ ಮರುದಿನವೇ ಫೀಲ್ಡಿಗಿಳಿದು ಪರಿಶೀಲಿಸಿದ ಅಧ್ಯಕ್ಷ ವಾಸು ಪೂಜಾರಿ

ಬಂಟ್ವಾಳ, ಸೆಪ್ಟೆಂಬರ್ 19, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ವಿವಿಧೆಡೆ ಪರಿಹಾರ ಕಾಣದ ತ್ಯಾಜ್ಯ ಸಮಸ್ಯೆ ಇರುವ ಬಗ್ಗೆ ಬುಧವಾರ ಪುರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ಗಂಭೀರವಾಗಿ ವಿಷಯ ಪ್ರಸ್ತಾಪಿಸಿ ಚರ್ಚೆ ನಡೆಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಪ್ರಯತ್ನ ನಡೆಸುವ ಭರವಸೆ ನೀಡಿದ ಅಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಅವರು ಮರುದಿನವೇ ಅಂದರೆ ಗುರುವಾರ ಬೆಳಿಗ್ಗೆಯೇ ಫೀಲ್ಡಿಗಿಳಿದಿದ್ದಾರೆ. ಪ್ರಮುಖವಾಗಿ ಬಂಟ್ವಾಳ ಪುರಸಭೆ ಹಾಗೂ ಸಜಿಪಮುನ್ನೂರು ಗ್ರಾಮ ಪಂಚಾಯತ್ ಗಡಿ ಪ್ರದೇಶವಾಗಿರುವ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಬಂಗ್ಲೆಗುಡ್ಡೆ ಪರಿಸರದ ಶ್ರೀ ಶಾರದಾ ಪ್ರೌಢಶಾಲೆ ಹಾಗೂ ಎಸ್ ಎಲ್ ಎನ್ ಪಿ ವಿದ್ಯಾಲಯ ಈ ಎರಡು ಶಾಲಾ ವಠಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ತಗಡು ಶೀಟು ಅಳವಡಿಸಿ ಸಾರ್ವಜನಿಕರು ತ್ಯಾಜ್ಯ ಎಸೆಯದಂತೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಪುರಸಭಾ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಅವರಿಗೆ ಸೂಚಿಸಿದರು.

ಈ ಸಂದರ್ಭ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪುರಸಭಾ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಮುಹಮ್ಮದ್ ನಂದಾವರ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ತ್ಯಾಜ್ಯ ವಿಲೇವಾರಿ : ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಯಾದ ಮರುದಿನವೇ ಫೀಲ್ಡಿಗಿಳಿದು ಪರಿಶೀಲಿಸಿದ ಅಧ್ಯಕ್ಷ ವಾಸು ಪೂಜಾರಿ Rating: 5 Reviewed By: karavali Times
Scroll to Top