ಇಂದಿನಿಂದ (ಸೆ 7) ರಮಾನಾಥ ರೈ ನೇತೃತ್ವದ ಜಕ್ರಿಬೆಟ್ಟು ಗಣೇಶೋತ್ಸವ : ಸೆ. 11 ರಂದು ಶೋಭಾ ಯಾತ್ರೆ - Karavali Times ಇಂದಿನಿಂದ (ಸೆ 7) ರಮಾನಾಥ ರೈ ನೇತೃತ್ವದ ಜಕ್ರಿಬೆಟ್ಟು ಗಣೇಶೋತ್ಸವ : ಸೆ. 11 ರಂದು ಶೋಭಾ ಯಾತ್ರೆ - Karavali Times

728x90

6 September 2024

ಇಂದಿನಿಂದ (ಸೆ 7) ರಮಾನಾಥ ರೈ ನೇತೃತ್ವದ ಜಕ್ರಿಬೆಟ್ಟು ಗಣೇಶೋತ್ಸವ : ಸೆ. 11 ರಂದು ಶೋಭಾ ಯಾತ್ರೆ

ಬಂಟ್ವಾಳ, ಸೆಪ್ಟೆಂಬರ್ 06, 2024 (ಕರಾವಳಿ ಟೈಮ್ಸ್) : ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ-ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ನಡೆಯುವ 21ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆ ಇಂದಿನಿಂದ (ಸೆಪ್ಟೆಂಬರ್ 7) ಸೆಪ್ಟೆಂಬರ್ 11ರ ಬುಧವಾರದವರೆಗೆ ಬಂಟ್ವಾಳ ಬೈಪಾಸಿನ ಜಕ್ರಿಬೆಟ್ಟು ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಲಿದೆ. 

ಶನಿವಾರ ಬೆಳಿಗ್ಗೆ 10 ಗಂಟೆಗೆ ಪ್ರಾರ್ಥನೆ, ಪುಣ್ಯಾಹ ವಾಚನ, 11 ಗಂಟೆಗೆ ವಿಗ್ರಹ ಪ್ರತಿಷ್ಠಾಪನೆ, ಪ್ರತಿಷ್ಠಾ  ಹೋಮ, ಗಣಪತಿ ಹೋಮ, ಅಪ್ಪದ ಪೂಜೆ, 11.30ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದೆ. ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಂಗಳೂರಿನ ಖ್ಯಾತ ವೈದ್ಯ ಡಾ ಶಿವಪ್ರಸಾದ್ ರೈ ಉದ್ಘಾಟಿಸುವರು. ಮಾಜಿ ಸಚಿವ ಬಿ ರಮಾನಾಥ ರೈ ಅಧ್ಯಕ್ಷತೆ ವಹಿಸುವರು. ಬಳಿಕ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 

ಮಧ್ಯಾಹ್ನ 2 ಗಂಟೆಗೆ “ಕೋಟಿ ಚೆನ್ನಯ” ಯಕ್ಷಗಾನ ತಾಳಮದ್ದಲೆ, ಸಂಜೆ 6 ಗಂಟೆಗೆ ನೃತ್ಯೋಲ್ಲಾಸ, ರಾತ್ರಿ 9.30ಕ್ಕೆ ನೃತ್ಯ ಗಾನ ಸಂಭ್ರಮ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಇಂದಿನಿಂದ (ಸೆ 7) ರಮಾನಾಥ ರೈ ನೇತೃತ್ವದ ಜಕ್ರಿಬೆಟ್ಟು ಗಣೇಶೋತ್ಸವ : ಸೆ. 11 ರಂದು ಶೋಭಾ ಯಾತ್ರೆ Rating: 5 Reviewed By: karavali Times
Scroll to Top