ಸೆಪ್ಟೆಂಬರ್ 3 ರಂದು ಸಂಸದ ಸೆಸಿಕಾಂತ್ ಸೆಂಥಿಲ್ ಮಂಗಳೂರಿಗೆ : ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮ - Karavali Times ಸೆಪ್ಟೆಂಬರ್ 3 ರಂದು ಸಂಸದ ಸೆಸಿಕಾಂತ್ ಸೆಂಥಿಲ್ ಮಂಗಳೂರಿಗೆ : ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮ - Karavali Times

728x90

31 August 2024

ಸೆಪ್ಟೆಂಬರ್ 3 ರಂದು ಸಂಸದ ಸೆಸಿಕಾಂತ್ ಸೆಂಥಿಲ್ ಮಂಗಳೂರಿಗೆ : ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮ

ಮಂಗಳೂರು, ಆಗಸ್ಟ್ 31, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ದ.ಕ. ಜಿಲ್ಲಾಧಿಕಾರಿ, ತಮಿಳುನಾಡಿನ ತಿರುವಲ್ಲೂರು ಕ್ಷೇತ್ರದ ಸಂಸದ ಸಸಿಕಾಂತ್ ಸೆಂಥಿಲ್ ಅವರ ಜೊತೆ ಪಕ್ಷದ ಕಾರ್ಯಕರ್ತರ ಸಂವಾದ ಕಾರ್ಯಕ್ರಮವು ಸೆಪ್ಟೆಂಬರ್ 3 ರಂದು ಮಂಗಳವಾರ ಅಪರಾಹ್ನ 3:30 ಗಂಟೆಗೆ ನಗರದ ಬೆಂದೂರುನಲ್ಲಿರುವ ಸಂತ ಸೆಬೆಸ್ಟಿಯನ್ ಜುಬುಲಿ ಹಾಲ್ ನಲ್ಲಿ ನಡೆಯಲಿದೆ. 

ಇದಕ್ಕೂ ಮುನ್ನ ಅವರು ಅಪರಾಹ್ನ 3 ಗಂಟೆಗೆ ಕದ್ರಿ-ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸೆಪ್ಟೆಂಬರ್ 3 ರಂದು ಸಂಸದ ಸೆಸಿಕಾಂತ್ ಸೆಂಥಿಲ್ ಮಂಗಳೂರಿಗೆ : ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮ Rating: 5 Reviewed By: karavali Times
Scroll to Top