ಅಕ್ರಮ ದನ ಸಾಗಾಟ ಪ್ರಕರಣ ಬೇಧಿಸಿದ ವೇಣೂರು ಪೊಲೀಸರು, ಆರೋಪಿ ಪಿಕಪ್ ಚಾಲಕ ಪರಾರಿ - Karavali Times ಅಕ್ರಮ ದನ ಸಾಗಾಟ ಪ್ರಕರಣ ಬೇಧಿಸಿದ ವೇಣೂರು ಪೊಲೀಸರು, ಆರೋಪಿ ಪಿಕಪ್ ಚಾಲಕ ಪರಾರಿ - Karavali Times

728x90

27 July 2024

ಅಕ್ರಮ ದನ ಸಾಗಾಟ ಪ್ರಕರಣ ಬೇಧಿಸಿದ ವೇಣೂರು ಪೊಲೀಸರು, ಆರೋಪಿ ಪಿಕಪ್ ಚಾಲಕ ಪರಾರಿ

ಬೆಳ್ತಂಗಡಿ, ಜುಲೈ 27, 2024 (ಕರಾವಳಿ ಟೈಮ್ಸ್) :  ಪಿಕಪ್ ವಾಹನದಲ್ಲಿ ಅಕ್ರಮ ದನ ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ವೇಣೂರು ಪೊಲೀಸರು ಬೇಧಿಸಿದ ಘಟನೆ ಬೆಳ್ತಂಗಡಿ ತಾಲೂಕು, ಕರಿಮಣೇಲು ಗ್ರಾಮದ ಚರ್ಚ್ ಕ್ರಾಸ್ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ. 

ವೇಣೂರು ಠಾಣಾ ಪಿಎಸ್ಸೆöÊ ಶ್ರೀಶೈಲ್ ಡಿ ಮುರಗೋಡು ಅವರ ನೇತೃತ್ವದ ಪೊಲೀಸರು ತಪಾಸಣೆಗಾಗಿ ಪಿಕಪ್ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕ ವಾಹನ ನಿಲ್ಲಿಸದೇ ನಾರಾವಿ ರಸ್ತೆ ಕಡೆ ಹೋಗಿದ್ದು, ಸದ್ರಿ ವಾಹನವನ್ನು ಪೊಲೀಸರು ಹಿಂಬಾಲಿಸಿದಾಗ ಆರೋಪಿ ಚಾಲಕ ಮೂಡುಕೋಡಿ  ಗ್ರಾಮದ  ಕೊಪ್ಪದ  ಬಾಕಿಮಾರು  ಎಂಬಲ್ಲಿನ ನಿರ್ಜನ  ಪ್ರದೇಶದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಸದ್ರಿ ಪಿಕಪ್  ವಾಹನವನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ  ನಂಬರ್ ಪ್ಲೇಟ್  ತೆಗೆದಿದ್ದು, ಒಂದು ದನವನ್ನು ಹಿಂಸಾತ್ಮಕವಾಗಿ ಸಾಗಾಟ  ಮಾಡುತ್ತಿರುವುದು ಕಂಡುಬAದಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ವಾಹನ ಹಾಗೂ ಜಾನುವಾರನ್ನು  ಸ್ವಾದೀನಪಡಿಸಿಕೊಂಡು ವೇಣೂರು ಪೊಲೀಸ್  ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2024 ಕಲಂ 4, 5, 7, 12 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020 ಮತ್ತು ಕಲಂ 11(ಡಿ) ಪ್ರಾಣಿ ಹಿಂಸೆ ತಡೆ  ಕಾಯಿದೆ-1960 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ದನ ಸಾಗಾಟ ಪ್ರಕರಣ ಬೇಧಿಸಿದ ವೇಣೂರು ಪೊಲೀಸರು, ಆರೋಪಿ ಪಿಕಪ್ ಚಾಲಕ ಪರಾರಿ Rating: 5 Reviewed By: karavali Times
Scroll to Top