ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ ಪ್ರಕರಣ : ಪುದು, ವೀಕರಂಭ, ಕಾವಳಪಡೂರು ಗ್ರಾಮಗಳಲ್ಲಿ ಮನೆಗಳಿಗೆ ಹಾನಿ - Karavali Times ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ ಪ್ರಕರಣ : ಪುದು, ವೀಕರಂಭ, ಕಾವಳಪಡೂರು ಗ್ರಾಮಗಳಲ್ಲಿ ಮನೆಗಳಿಗೆ ಹಾನಿ - Karavali Times

728x90

16 July 2024

ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ ಪ್ರಕರಣ : ಪುದು, ವೀಕರಂಭ, ಕಾವಳಪಡೂರು ಗ್ರಾಮಗಳಲ್ಲಿ ಮನೆಗಳಿಗೆ ಹಾನಿ

 ಬಂಟ್ವಾಳ, ಜುಲೈ 16, 2024 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಂಗಳವಾರವೂ ಮಳೆ ಬಿರುಸು ಮುಂದುವರಿದಿದ್ದು, ಮಳೆ ಹಾನಿ ಪ್ರಕರಣಗಳೂ ವರದಿಯಾಗಿದೆ. ಪುದು ಗ್ರಾಮಾದ ಸುಜೀರು ನಿವಾಸಿ ಸುಶೀಲ ಕೋಂ ನಾಗೇಶ ಅವರ ಮನೆ ಹತ್ತಿರದ ಬಂಡೆ ಕಲ್ಲು ಕುಸಿದು ಬಿದ್ದು ಹಾನಿ ಸಂಭವಿಸಿದೆ. ವೀರಕಂಭ ಗ್ರಾಮದ ಮಜಿ ಎಂಬಲ್ಲಿನ ನಿವಾಸಿ ಯೋಗಿನಿ ಕೋಂ ಶ್ರೀಧರ ಅವರ ಮನೆ ಭಾಗಶ: ಹಾನಿಯಾಗಿದೆ. ಕಾವಳಪಡೂರು ಗ್ರಾಮದ ಮಧ್ವ ನಿವಾಸಿ ಪ್ರಮೀಳಾ ಕೋಂ ದಿವಂಗತ ಸುರೇಂದ್ರ ಶೆಟ್ಟಿ ಅವರ ಪಕ್ಕಾ ಮನೆಗೆ ಮರ ಬಿದ್ದು ಭಾಗಶ ಹಾನಿಯಾಗಿದೆ. ಮಂಗಳವಾರ ಸಂಜೆ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 6.4 ಮೀಟರ್ ಆಗಿದ್ದು, ಅಪಾಯದ ಮಟ್ಟ 8.5 ಮೀಟರ್ ಆಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ ಪ್ರಕರಣ : ಪುದು, ವೀಕರಂಭ, ಕಾವಳಪಡೂರು ಗ್ರಾಮಗಳಲ್ಲಿ ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top