ಮಣಿನಾಲ್ಕೂರು : ಮೀನು ಹಿಡಿಯುತ್ತಿದ್ದ ಸುರತ್ಕಲ್ ನಿವಾಸಿ ನೀರುಪಾಲು - Karavali Times ಮಣಿನಾಲ್ಕೂರು : ಮೀನು ಹಿಡಿಯುತ್ತಿದ್ದ ಸುರತ್ಕಲ್ ನಿವಾಸಿ ನೀರುಪಾಲು - Karavali Times

728x90

5 July 2024

ಮಣಿನಾಲ್ಕೂರು : ಮೀನು ಹಿಡಿಯುತ್ತಿದ್ದ ಸುರತ್ಕಲ್ ನಿವಾಸಿ ನೀರುಪಾಲು

ಬಂಟ್ವಾಳ, ಜುಲೈ 05, 2024 (ಕರಾವಳಿ ಟೈಮ್ಸ್) : ಸ್ನೇಹಿತರ ಜೊತೆ ನೇತ್ರಾವತಿ ನದಿ ಸಂಧಿಸುವ ತೋಡಿನ ಸೇತುವೆ ಮೇಲೆ ಮೀನು ಹಿಡಿಯುತ್ತಿದ್ದ ವ್ಯಕ್ತಿ ನೀರುಪಾಲಾದ ಘಟನೆ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ. 

ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ವ್ಯಕ್ತಿಯನ್ನು ಸುರತ್ಕಲ್ ಸಮೀಪದ ಕಾನ ನಿವಾಸಿ ಮೈಕಲ್ (50) ಎಂದು ಗುರುತಿಸಲಾಗಿದೆ. ಇವರು ಸರಪಾಡಿ ಸಮೀಪದ ಮಾವಿನ ಕಟ್ಟೆ ಎಂಬಲ್ಲಿನ ನೆಂಟರ ಮನೆಗೆ ಬಂದಿದ್ದು, ಅಲ್ಲಿಂದ ಸ್ನೇಹಿತರ ಜೊತೆ ಸೇರಿ ನಾಲ್ಕು ಮಂದಿ ಗುರುವಾರ ಸಂಜೆ ಗಾಳ ಹಾಕಿ ಮೀನು ಹಿಡಿಯಲು ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕು ಗಡಿಯಲ್ಲಿನ ನೇತ್ರಾವತಿ ನದಿಯ ಹಿನ್ನೀರು ತುಂಬುವ ಬೆಳ್ತಂಗಡಿ ತಾಲೂಕಿಗೆ ಸೇರಿದ ತೆಕ್ಕಾರು ಗ್ರಾಮದ ಸೇತುವೆ ಮೇಲೆ ಹೋಗಿದ್ದರು. ಸೇತುವೆ ಮೇಲೆ ಕುಳಿತು ಗಾಳ ಹಾಕುವ ವೇಳೆ ಮೈಕಲ್ ಅವರು ಕಾಲು ಜಾರಿ ತುಂಬಿ ಹರಿಯುತ್ತಿದ್ದ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. 

ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ನೀರಿನಲ್ಲಿ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ದೋಣಿಯ ಮೂಲಕ ಗುರುವಾರ ರಾತ್ರಿವರೆಗೂ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಬಳಿಕ ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ನೀರಿನ ಹರಿವು ಕಡಿಮೆಯಾಗಿದ್ದರಿಂದ ಸ್ಥಳೀಯರು ಕಾರ್ಯಾಚರಣೆ ಮುಂದುವರಿಸಿದಾಗ ಮೃತದೇಹ ಪತ್ತೆಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಣಿನಾಲ್ಕೂರು : ಮೀನು ಹಿಡಿಯುತ್ತಿದ್ದ ಸುರತ್ಕಲ್ ನಿವಾಸಿ ನೀರುಪಾಲು Rating: 5 Reviewed By: karavali Times
Scroll to Top