ಗುಡ್ಡ ಕುಸಿತ ಭೀತಿ : ಜುಲೈ 18 ರಿಂದ 22ರವರೆಗೆ ರಾತ್ರಿ ವೇಳೆ ಮಡಿಕೇರಿ ಮಾರ್ಗ ಸಂಚಾರ ಬಂದ್ - Karavali Times ಗುಡ್ಡ ಕುಸಿತ ಭೀತಿ : ಜುಲೈ 18 ರಿಂದ 22ರವರೆಗೆ ರಾತ್ರಿ ವೇಳೆ ಮಡಿಕೇರಿ ಮಾರ್ಗ ಸಂಚಾರ ಬಂದ್ - Karavali Times

728x90

18 July 2024

ಗುಡ್ಡ ಕುಸಿತ ಭೀತಿ : ಜುಲೈ 18 ರಿಂದ 22ರವರೆಗೆ ರಾತ್ರಿ ವೇಳೆ ಮಡಿಕೇರಿ ಮಾರ್ಗ ಸಂಚಾರ ಬಂದ್

ಮಂಗಳೂರು, ಜುಲೈ 18, 2024 (ಕರಾವಳಿ ಟೈಮ್ಸ್) : ರಾಷ್ಟ್ರೀಯ ಹೆದ್ದಾರಿ-275ರ ಸಂಪಾಜೆಯಿಂದ ಮಡಿಕೇರಿವರೆಗಿನ ಕೆಲ ಪ್ರದೇಶಗಳಲ್ಲಿ ಭೂಕುಸಿತ/ ಗುಡ್ಡಕುಸಿತ ಉಂಟಾಗುವ ಸಂಭವವಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಸದ್ರಿ ಮಾರ್ಗವಾಗಿ ಸಾಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು (ತುರ್ತು ಸೇವೆಗಳ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ಕಾರ್ಯನಿರ್ವಹಿಸುವ ಅಧಿಕಾರಿ / ಸಿಬ್ಬಂದಿಗಳು ಸಂಚರಿಸುವ ವಾಹನಗಳನ್ನು ಹೊರತುಪಡಿಸಿ) ಜುಲೈ 18 ರಿಂದ 22 ರವರೆಗೆ ಪ್ರತಿ ದಿನ ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಖಾಂತರ, ಮೈಸೂರು, ಬೆಂಗಳೂರು ಮುಂತಾದ ಸ್ಥಳಗಳಿಗೆ ಸಂಚರಿಸುವ ವಾಹನಗಳು, ಬದಲಿ ರಸ್ತೆಯಾದ ಚಾರ್ಮಾಡಿ ಘಾಟ್ ಕೊಟ್ಟಿಗೆಹಾರ ಮಾರ್ಗವನ್ನು ಬಳಸಬಹುದು ಎಂದು ಜಿಲ್ಲಾ ಎಸ್ಪಿ ಅವರು ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಗುಡ್ಡ ಕುಸಿತ ಭೀತಿ : ಜುಲೈ 18 ರಿಂದ 22ರವರೆಗೆ ರಾತ್ರಿ ವೇಳೆ ಮಡಿಕೇರಿ ಮಾರ್ಗ ಸಂಚಾರ ಬಂದ್ Rating: 5 Reviewed By: karavali Times
Scroll to Top