ಉಪ್ಪಿನಂಗಡಿ : ಮನೆಗೆ ನುಗ್ಗಿ ಕಳವಿಗೆ ಯತ್ನಿಸುತ್ತಿದ್ದಾಗ ಎಚ್ಚರಗೊಂಡ ಮನೆ ಮಂದಿ, ಹಿಂಬಾಗಿಲ ಮೂಲಕ ಎಸ್ಕೇಪ್ ಆದ ಕಳ್ಳ - Karavali Times ಉಪ್ಪಿನಂಗಡಿ : ಮನೆಗೆ ನುಗ್ಗಿ ಕಳವಿಗೆ ಯತ್ನಿಸುತ್ತಿದ್ದಾಗ ಎಚ್ಚರಗೊಂಡ ಮನೆ ಮಂದಿ, ಹಿಂಬಾಗಿಲ ಮೂಲಕ ಎಸ್ಕೇಪ್ ಆದ ಕಳ್ಳ - Karavali Times

728x90

13 July 2024

ಉಪ್ಪಿನಂಗಡಿ : ಮನೆಗೆ ನುಗ್ಗಿ ಕಳವಿಗೆ ಯತ್ನಿಸುತ್ತಿದ್ದಾಗ ಎಚ್ಚರಗೊಂಡ ಮನೆ ಮಂದಿ, ಹಿಂಬಾಗಿಲ ಮೂಲಕ ಎಸ್ಕೇಪ್ ಆದ ಕಳ್ಳ

ಉಪ್ಪಿನಂಗಡಿ, ಜುಲೈ 13, 2024 (ಕರಾವಳಿ ಟೈಮ್ಸ್) : ಮನೆಯ ಹಿಂಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಮನೆ ಮಂದಿ ಎಚ್ಚರಗೊಂಡಿದ್ದರಿಂದ ಕಳ್ಳ ಹಿಂಬಾಗಿಲ ಮೂಲಕವೆ ಎಸ್ಕೇಪ್ ಆದ ಘ ಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಿಯಡ್ಕ ಎಂಬಲ್ಲಿ ಶನಿವಾರ ಮುಂಜಾನೆ ವೇಳೆ ನಡೆದಿದೆ. 

ಈ ಬಗ್ಗೆ ಮನೆಮಾಲಿಕ ರೋಹಿತ್ (25) ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ರೋಹಿತ್ ಅವರು ಶುಕ್ರವಾರ ರಾತ್ರಿ ಎಂದಿನಂತೆ ಊಟ ಮಾಡಿ ಮನೆಯ ಎದುರು ಹಾಲ್ ನಲ್ಲಿ ಮಲಗಿರುತ್ತಾರೆ. ಮರು ದಿನ ಶನಿವಾರ (ಜುಲೈ 13) ಮುಂಜಾನೆ ಯಾರೋ ಕಳ್ಳರು, ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಮುರಿದು ಒಳ ಪ್ರವೇಶಿಸಿ, ಕೋಣೆಯಲ್ಲಿ ಕಳವು ಮಾಡಲು ಪ್ರಯತ್ನಿಸಿದಾಗ, ರೋಹಿತ್ ಅವರ ತಾಯಿ ಎಚ್ಚರಗೊಂಡು ಬೊಬ್ಬೆ ಹಾಕಿರುತ್ತಾರೆ.  ಈ ವೇಳೆ ರೋಹಿತ್ ಅವರು ಎದ್ದು ನೋಡಿದಾಗ, ಕಳವು ಮಾಡಲು ಪ್ರಯತ್ನಿಸುತ್ತಿದ್ದಾತ ಹಿಂಬಾಗಿಲಿನ ಮೂಲಕ ಓಡಿ ಪರಾರಿಯಾಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಉಪ್ಪಿನಂಗಡಿ : ಮನೆಗೆ ನುಗ್ಗಿ ಕಳವಿಗೆ ಯತ್ನಿಸುತ್ತಿದ್ದಾಗ ಎಚ್ಚರಗೊಂಡ ಮನೆ ಮಂದಿ, ಹಿಂಬಾಗಿಲ ಮೂಲಕ ಎಸ್ಕೇಪ್ ಆದ ಕಳ್ಳ Rating: 5 Reviewed By: karavali Times
Scroll to Top