ಬ್ಯಾಂಕ್ ಮಾದರಿಯ ಸಂದೇಶ ಕಳಿಸಿ ಲಕ್ಷಾಂತರ ರೂಪಾಯಿ ದೋಚಿದ ಅಪರಿಚಿತ - Karavali Times ಬ್ಯಾಂಕ್ ಮಾದರಿಯ ಸಂದೇಶ ಕಳಿಸಿ ಲಕ್ಷಾಂತರ ರೂಪಾಯಿ ದೋಚಿದ ಅಪರಿಚಿತ - Karavali Times

728x90

6 July 2024

ಬ್ಯಾಂಕ್ ಮಾದರಿಯ ಸಂದೇಶ ಕಳಿಸಿ ಲಕ್ಷಾಂತರ ರೂಪಾಯಿ ದೋಚಿದ ಅಪರಿಚಿತ

ಬೆಳ್ತಂಗಡಿ, ಜುಲೈ 06, 2024 (ಕರಾವಳಿ ಟೈಮ್ಸ್) : ಮೊಬೈಲಿಗೆ ಬ್ಯಾಂಕ್ ಮಾದರಿಯ ಸಂದೇಶ ಕಳಿಸಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೊಕ್ಕಡ ನಿವಾಸಿ ಶ್ರೀನಾಥ ಬಿ (29) ಅವರು ಜೂನ್ 30 ರಂದು ಸಂಜೆ ತನ್ನ  ಮನೆಯಲ್ಲಿರುವಾಗ, À ವಾಟ್ಸಾಪ್ ಸಂಖ್ಯೆಗೆ ಅವರ ಬ್ಯಾಂಕಿಗೆ ಸಂಬಂಧಿಸಿರುವಂತೆ ಕಾಣಲ್ಪಡುವ ಮೆಸೆಜ್ ಬಂದಿರುತ್ತದೆ. ಸದ್ರಿ ಮೆಸೇಜ್ ನಲ್ಲಿದ್ದ ಲಿಂಕ್ ಓಪನ್ ಮಾಡಿದ ತಕ್ಷಣ ವಾಟ್ಸಾಪ್ ಬ್ಲಾಕ್ ಆಗಿರುತ್ತದೆ. ಬಳಿಕ ಯಾವುದೇ  ಓಟಿಪಿ ನೀಡದಿದ್ದರೂ,  ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂಪಾಯಿ ಹಣವನ್ನು ಅಪರಿಚಿತ ವ್ಯಕ್ತಿ ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾನೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 53/2024 ಕಲಂ 417, 419ಐಪಿಸಿ 66(ಸಿ) 66(ಡಿ) ಐಟಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬ್ಯಾಂಕ್ ಮಾದರಿಯ ಸಂದೇಶ ಕಳಿಸಿ ಲಕ್ಷಾಂತರ ರೂಪಾಯಿ ದೋಚಿದ ಅಪರಿಚಿತ Rating: 5 Reviewed By: karavali Times
Scroll to Top