ಪುತ್ತೂರು : ಅಟೋ ರಿಕ್ಷಾ ಬಾಡಿಗೆ ವಿಚಾರದಲ್ಲಿ ಕಾಸರಗೋಡು ಮೂಲಕ ವ್ಯಕ್ತಿಗೆ ಹಲ್ಲೆ, ಪ್ರಕರಣ ದಾಖಲು - Karavali Times ಪುತ್ತೂರು : ಅಟೋ ರಿಕ್ಷಾ ಬಾಡಿಗೆ ವಿಚಾರದಲ್ಲಿ ಕಾಸರಗೋಡು ಮೂಲಕ ವ್ಯಕ್ತಿಗೆ ಹಲ್ಲೆ, ಪ್ರಕರಣ ದಾಖಲು - Karavali Times

728x90

25 July 2024

ಪುತ್ತೂರು : ಅಟೋ ರಿಕ್ಷಾ ಬಾಡಿಗೆ ವಿಚಾರದಲ್ಲಿ ಕಾಸರಗೋಡು ಮೂಲಕ ವ್ಯಕ್ತಿಗೆ ಹಲ್ಲೆ, ಪ್ರಕರಣ ದಾಖಲು

ಪುತ್ತೂರು, ಜುಲೈ 25, 2024 (ಕರಾವಳಿ ಟೈಮ್ಸ್) : ಅಟೋ ಬಾಡಿಗೆ ವಿಚಾರದಲ್ಲಿ ತಗಾದೆ ಎತ್ತಿದ ರಿಕ್ಷಾ ಚಾಲಕನೋರ್ವ ಕಾಸರಗೋಡು ಮೂಲದ ವ್ಯಕ್ತಿಗೆ ಹಲ್ಲೆ ನಡೆಸಿದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಲ್ಲೆಯಿಂದ ಗಾಯಗೊಂಡ ವ್ಯಕ್ತಿಯನ್ನು ಕಾಸರಗೋಡು ಗ್ರಾಮದ ಆಡೂರು ನಿವಾಸಿ ವಿನೋದ್ ಕುಮಾರ್ (28) ಎಂದು ಹೆಸರಿಸಲಾಗಿದೆ. ಇವರಿಗೆ ಅಟೋ ಚಾಲಕ ಬ್ರಿಜೇಶ್ ಎಂಬವರು ಕರೆ ಮಾಡಿ ಅಟೋ ಬಾಡಿಗೆ  ವಿಚಾರದಲ್ಲಿ ತಕರಾರು ತೆಗೆದು, ಬೆದರಿಕೆ ಒಡ್ಡಿದ್ದಾರೆ. ಈ ವಿಚಾರವನ್ನು ವಿನೋದ್ ಕುಮಾರ್ ಅವರು ಆರೋಪಿತನ ಅಣ್ಣ ವೃತೀನ್ ಅವರಿಗೆ ತಿಳಿಸಿರುತ್ತಾರೆ. ಜುಲೈ 24 ರಂದು ಬೆಳಿಗ್ಗೆ ವಿನೋದ್ ಕುಮಾರ್ ಅವರು ಆಟೋ ರಿಕ್ಷಾದಲ್ಲಿ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು  ಗ್ರಾಮದಲ್ಲಿರುವ ಶನ್ಯ ವೈನ್ ಶಾಪ್ ಬಳಿಯಿದ್ದಾಗ, ಆರೋಪಿ ಬ್ರಿಜೇಶ್ ಆತನ ಆಟೋರಿಕ್ಷಾದಲ್ಲಿ ಚೇತನ್ ಮತ್ತು ಕಿಶೋರ್ ಅವರನ್ನು ಕುಳ್ಳಿಸಿರಿಕೊಂಡು ಬಂದು, ವಿನೋದ್ ಕುಮಾರ್ ಅವರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ  ವಿನೋದ್ ಅವರು ಪುತ್ತೂರು ಸರಕಾರಿ  ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 87/2024, ಕಲಂ 126(2), 115(2) ಜೊತೆಗೆ 3(5) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಅಟೋ ರಿಕ್ಷಾ ಬಾಡಿಗೆ ವಿಚಾರದಲ್ಲಿ ಕಾಸರಗೋಡು ಮೂಲಕ ವ್ಯಕ್ತಿಗೆ ಹಲ್ಲೆ, ಪ್ರಕರಣ ದಾಖಲು Rating: 5 Reviewed By: karavali Times
Scroll to Top