ಬೆಳ್ತಂಗಡಿ : ಕಾರಿಗೆ ಬೈಕ್ ಅಡ್ಡ ಇಟ್ಟು ಬಂದೂಕು ತೋರಿಸಿ ಜೀವಬೆದರಿಕೆ - Karavali Times ಬೆಳ್ತಂಗಡಿ : ಕಾರಿಗೆ ಬೈಕ್ ಅಡ್ಡ ಇಟ್ಟು ಬಂದೂಕು ತೋರಿಸಿ ಜೀವಬೆದರಿಕೆ - Karavali Times

728x90

6 July 2024

ಬೆಳ್ತಂಗಡಿ : ಕಾರಿಗೆ ಬೈಕ್ ಅಡ್ಡ ಇಟ್ಟು ಬಂದೂಕು ತೋರಿಸಿ ಜೀವಬೆದರಿಕೆ

ಬೆಳ್ತಂಗಡಿ, ಜುಲೈ 06, 2024 (ಕರಾವಳಿ ಟೈಮ್ಸ್) : ಕಾರಿಗೆ ಬೈಕ್ ಅಡ್ಡವಾಗಿಟ್ಟು ಬಂದೂಕು ಗುರಿ ಇಟ್ಟು ಜೀವಬೆದರಿಕೆ ಹಾಕಿದ ಘಟನೆ ಬಾರ್ಯ ಗ್ರಾಮದ ಸೋಕಿಲ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. 

ಈ ಬಗ್ಗೆ ಬಂಟ್ವಾಳ ತಾಲೂಕು ಉಳಿ ಗ್ರಾಮದ ನಿವಾಸಿ ಪ್ರಶಾಂತ್ (30) ಅವರು ದೂರು ನೀಡಿದ್ದು, ಇವರು ಶುಕ್ರವಾರ ಮಧ್ಯಾಹ್ನ ತನ್ನ ಕಾರಿನಲ್ಲಿ ಬೆಳ್ತಂಗಡಿ ಬಾರ್ಯ ಗ್ರಾಮದ, ಸೋಕಿಲ ಎಂಬಲ್ಲಿ ತೆರಳುತ್ತಿದ್ದಾಗ ಆರೋಪಿ ಪೂವಪ್ಪ ಗೌಡ ಎಂಬವರು ಕೆ.ಎ 19 ಇಪಿ8273 ನೋಂದಣಿ ಸಂಖ್ಯೆಯ ಮೋಟಾರು ಸೈಕಲಿನಲ್ಲಿ ಬಂದು ಬೈಕನ್ನು ಕಾರಿಗೆ ಅಡ್ಡವಾಗಿಟ್ಟು ಪ್ರಶಾಂತ್ ಅವರ ಕಾರಿನ ಕಡೆಗೆ ತನ್ನ ಬಳಿಯಿದ್ದ ಬಂದೂಕನ್ನು ಗುರಿ ಇಟ್ಟು, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಕಾರಿಗೆ ಬೈಕ್ ಅಡ್ಡ ಇಟ್ಟು ಬಂದೂಕು ತೋರಿಸಿ ಜೀವಬೆದರಿಕೆ Rating: 5 Reviewed By: karavali Times
Scroll to Top