ಬಂಟ್ವಾಳ : ಕಾಣೆಯಾಗಿದ್ದ ಅಟೋ ರಿಕ್ಷಾ ಚಾಲಕನ ಮೃತದೇಹ ಅಡ್ಡೂರು ಫಲ್ಗುಣಿ ನದಿಯಲ್ಲಿ ಪತ್ತೆ - Karavali Times ಬಂಟ್ವಾಳ : ಕಾಣೆಯಾಗಿದ್ದ ಅಟೋ ರಿಕ್ಷಾ ಚಾಲಕನ ಮೃತದೇಹ ಅಡ್ಡೂರು ಫಲ್ಗುಣಿ ನದಿಯಲ್ಲಿ ಪತ್ತೆ - Karavali Times

728x90

6 July 2024

ಬಂಟ್ವಾಳ : ಕಾಣೆಯಾಗಿದ್ದ ಅಟೋ ರಿಕ್ಷಾ ಚಾಲಕನ ಮೃತದೇಹ ಅಡ್ಡೂರು ಫಲ್ಗುಣಿ ನದಿಯಲ್ಲಿ ಪತ್ತೆ

ಬಂಟ್ವಾಳ, ಜುಲೈ 06, 2024 (ಕರಾವಳಿ ಟೈಮ್ಸ್) : ಬಾಡಿಗೆ ಇದೆ ಎಂದು ಮನೆಯಿಂದ ಗುರುವಾರ ಮುಂಜಾನೆ ತೆರಳಿದ್ದ ಬಳಿಕ ನಾಪತ್ತೆಯಾಗಿದ್ದ ಅಟೋ ರಿಕ್ಷಾ ಚಾಲಕ ಕುಕ್ಕಿಪ್ಪಾಡಿ ನಿವಾಸಿ ಗಿರೀಶ್ (37) ಅವರ ಮೃತದೇಹ ಶುಕ್ರವಾರ ಸಂಜೆ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.

ಗಿರೀಶ್ ಗುರುವಾರ ಮುಂಜಾನೆ ಬಾಡಿಗೆ ಹೋಗಲು ಇದೆ ಎಂದು ಹೇಳಿ ಮನೆಯಿಂದ ತೆರಳಿದ್ದು, ಈ ವೇಳೆ ಗಸ್ತು ಕಾರ್ಯನಿರ್ವಹಿಸುತ್ತಿದ್ದ ಪೆÇಲೀಸರು ಪೆÇಳಲಿ ಸೇತುವೆ ಮೇಲೆ ರಿಕ್ಷಾ ನಿಂತಿದ್ದನ್ನು ಗಮನಿಸಿದ್ದಾರೆ. ಅದನ್ನು ಪರಿಶೀಲನೆ ನಡೆಸಿದ ಪೆÇಲೀಸರು ರಿಕ್ಷಾದಲ್ಲಿ ಯಾರೂ ಇಲ್ಲದೇ ಇರುವುದರಿಂದ ಗಿರೀಶನ ಮನೆಗೆ ಮಾಹಿತಿ ನೀಡಿದ್ದರು. ಗಿರೀಶ್ ಅವರು ಅಡ್ಡೂರು-ಪೆÇಳಲಿ ಸೇತುವೆಯ ಮೇಲೆ ವಾಹನ ನಿಲ್ಲಿಸಿ ಫಲ್ಗುಣಿ ನದಿಗೆ ಹಾರಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಇದೀಗ ಗಿರೀಶ್ ಅವರ ಮೃತದೇಹವು ಅಡ್ಡೂರು-ಕೆಳಗಿನಕೆರೆಯಲ್ಲಿ ಪತ್ತೆಯಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗಿರೀಶ್ ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಕಾಣೆಯಾಗಿದ್ದ ಅಟೋ ರಿಕ್ಷಾ ಚಾಲಕನ ಮೃತದೇಹ ಅಡ್ಡೂರು ಫಲ್ಗುಣಿ ನದಿಯಲ್ಲಿ ಪತ್ತೆ Rating: 5 Reviewed By: karavali Times
Scroll to Top