ಕಡೇಶಿವಾಲಯ : ಹಿಟ್ ಆಂಡ್ ರನ್ ನಡೆಸಿದ ಕಾರು ಚಾಲಕ, ಬೈಕ್ ಸಹಸವಾರ ಗಂಭೀರ - Karavali Times ಕಡೇಶಿವಾಲಯ : ಹಿಟ್ ಆಂಡ್ ರನ್ ನಡೆಸಿದ ಕಾರು ಚಾಲಕ, ಬೈಕ್ ಸಹಸವಾರ ಗಂಭೀರ - Karavali Times

728x90

17 June 2024

ಕಡೇಶಿವಾಲಯ : ಹಿಟ್ ಆಂಡ್ ರನ್ ನಡೆಸಿದ ಕಾರು ಚಾಲಕ, ಬೈಕ್ ಸಹಸವಾರ ಗಂಭೀರ

 ಬಂಟ್ವಾಳ, ಜೂನ್ 18, 2024 (ಕರಾವಳಿ ಟೈಮ್ಸ್) : ಕಾರೊಂದು ಹಿಟ್ ಆಂಡ್ ರನ್ ನಡೆಸಿದ ಪರಿಣಾಮ ಬೈಕ್ ಸಹಸವಾರ ಗಂಭೀರ ಗಾಯಗೊಂಡ ಘಟನೆ ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. 

ಗಾಯಗೊಂಡ ಬೈಕ್ ಸಹಸವಾರನನ್ನು ಬೆಳ್ತಂಗಡಿ ತಾಲೂಕು, ತೆಕ್ಕಾರು ನಿವಾಸಿ ತಿಮ್ಮಪ್ಪ ಪೂಜಾರಿ (63) ಎಂದು ಹೆಸರಿಸಲಾಗಿದೆ. ಇವರು ತನ್ನ ಮಗ ಲಿತಿನ್ ಸವಾರನಾಗಿ ಚಲಾಯಿಸುತ್ತಿದ್ದ ಬೈಕಿನಲ್ಲಿ ಬುಡೋಳಿ ಕಡೆಯಿಂದ ಮಾಣಿ ಮಾರ್ಗವಾಗಿ ತೆಕ್ಕಾರು ಕಡೆಗೆ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ, ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ಹಿಂದಿನಿಂದ ಬಂದ ಅಪರಿಚಿತ ಬಿಳಿ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದಿರುತ್ತಾನೆ. ಆರೋಪಿ ಕಾರನ್ನು ನಿಲ್ಲಿಸದೇ ಗಾಯಾಳುವನ್ನು ಉಪಚರಿಸದೇ ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಅಪಘಾತದ ಪರಿಣಾಮ ಸಹಸವಾರ ತಿಮ್ಮಪ್ಪ ಪೂಜಾರಿ ಅವರಿಗೆ ಗಾಯವಾಗಿರುತ್ತದೆ.  ಸವಾರ ಲಿತಿನ್ ಅವರಿಗೆ ಸಣ್ಣ ಪುಟ್ಟ ನೋವಾಗಿದ್ದು ಯಾವುದೇ ಗಾಯವಾಗಿರುವುದಿಲ್ಲ. 

ಗಾಯಾಳು ತಿಮ್ಮಪ್ಪ ಪೂಜಾರಿ ಅವರನ್ನು ಮಂಗಳೂರು-ಜ್ಯೋತಿ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡೇಶಿವಾಲಯ : ಹಿಟ್ ಆಂಡ್ ರನ್ ನಡೆಸಿದ ಕಾರು ಚಾಲಕ, ಬೈಕ್ ಸಹಸವಾರ ಗಂಭೀರ Rating: 5 Reviewed By: karavali Times
Scroll to Top