ಮಳೆಗಾಲದಲ್ಲಿ ರಜೆ ಘೋಷಿಸಿ ಮಕ್ಕಳ ಸ್ನೇಹಿಯಾಗಿ ಗುರುತಿಸಿಕೊಂಡ ಡೀಸಿ ಬಂಟ್ವಾಳದಲ್ಲಿ ಮಳೆ ಹಾನಿ ಪ್ರದೇಶ ವೀಕ್ಷಣೆಗೆ ಬಂದಾಗಲೂ ಮಕ್ಕಳ ಜೊತೆ ಬೆರೆತರು - Karavali Times ಮಳೆಗಾಲದಲ್ಲಿ ರಜೆ ಘೋಷಿಸಿ ಮಕ್ಕಳ ಸ್ನೇಹಿಯಾಗಿ ಗುರುತಿಸಿಕೊಂಡ ಡೀಸಿ ಬಂಟ್ವಾಳದಲ್ಲಿ ಮಳೆ ಹಾನಿ ಪ್ರದೇಶ ವೀಕ್ಷಣೆಗೆ ಬಂದಾಗಲೂ ಮಕ್ಕಳ ಜೊತೆ ಬೆರೆತರು - Karavali Times

728x90

28 June 2024

ಮಳೆಗಾಲದಲ್ಲಿ ರಜೆ ಘೋಷಿಸಿ ಮಕ್ಕಳ ಸ್ನೇಹಿಯಾಗಿ ಗುರುತಿಸಿಕೊಂಡ ಡೀಸಿ ಬಂಟ್ವಾಳದಲ್ಲಿ ಮಳೆ ಹಾನಿ ಪ್ರದೇಶ ವೀಕ್ಷಣೆಗೆ ಬಂದಾಗಲೂ ಮಕ್ಕಳ ಜೊತೆ ಬೆರೆತರು

 ಬಂಟ್ವಾಳ, ಜೂನ್ 28, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರ ಬಳಿಕ ಅದೇ ಮಾದರಿಯಲ್ಲಿ ಮಳೆಗಾಲದಲ್ಲಿ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಿಸುವ ಮೂಲಕ ತಾವೂ ಮಕ್ಕಳ ಸ್ನೇಹಿ ಡೀಸಿಯಾಗಿ ಗುರುತಿಸಿಕೊಂಡಿರುವ ಕಳೆದ ವರ್ಷ ಜಿಲ್ಲೆಯಲ್ಲಿ ಅಧಿಕಾರ ಸ್ವೀಕರಿಸಿರುವ ಮುಲ್ಲೈ ಮುಹಿಲನ್ ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆ ಹಾನಿ ಬಾಧಿತವಾಗುವ ಪ್ರದೇಶಗಳ ಪರಿಶೀಲನೆ ಬಂದ ಸಂದರ್ಭ ಖುದ್ದಾಗಿ ಮಕ್ಕಳನ್ನು ಭೇಟಿಯಾಗಿ ಒಂದಷ್ಟು ಕಾಲ ಮಕ್ಕಳ ಜೊತೆ ಬೆರೆತು ಗಮನ ಸೆಳೆದರು.

ನಮ್ಮ ಡೀಸಿ ಮುಲ್ಲೈ ಮುಹಿಲನ್ ಅವರಿಗೆ ಮಕ್ಕಳೆಂದರೆ ಅಚ್ಚುಮೆಚ್ಚು.  ಜಿಲ್ಲೆಗೆ ಬಂದು ಜಿಲ್ಲಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಮೂಲಕ ಮಕ್ಕಳ ಅಚ್ಚುಮೆಚ್ಚಿನ ಡಿ ಸಿ  ಎಂದೇ ಗುರುತಿಸಿಕೊಂಡಿದ್ದಾರೆ.

ಶುಕ್ರವಾರ ಬಂಟ್ವಾಳದ ಮಳೆ ಹಾನಿ ಬಾಧಿತ ಪ್ರದೇಶಗಳಾದ ಪಾಣೆಮಂಗಳೂರು, ಕಲ್ಲಡ್ಕ, ಮಾಣಿ, ಪೆರ್ನೆ ಮತ್ತಿತರ ಕಡೆ  ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಬಳಿಕ ಸಂಜೆ ವೇಳೆಗೆ ಬಿ ಸಿ ರೋಡು ಸಮೀಪದ ಮೊಡಂಕಾಪು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು.

ಇಲ್ಲಿನ ಮಕ್ಕಳೊಂದಿಗೆ ಒಂದಷ್ಟು ಸಮಯ ಮಕ್ಕಳಾಗಿ ಬೆರೆತು ಎಲ್ಲರಿಗೂ ಕೈಕುಲುಕಿ ಸಂಭ್ರಮಿಸಿದರು. ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ 

ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು. 

ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಮಳೆಗಾಲದಲ್ಲಿ ರಜೆ ಘೋಷಿಸಿ ಮಕ್ಕಳ ಸ್ನೇಹಿಯಾಗಿ ಗುರುತಿಸಿಕೊಂಡ ಡೀಸಿ ಬಂಟ್ವಾಳದಲ್ಲಿ ಮಳೆ ಹಾನಿ ಪ್ರದೇಶ ವೀಕ್ಷಣೆಗೆ ಬಂದಾಗಲೂ ಮಕ್ಕಳ ಜೊತೆ ಬೆರೆತರು Rating: 5 Reviewed By: lk
Scroll to Top