ಕನ್ಯಾನ : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು, ಮೂವರು ಆರೋಪಿಗಳ ದಸ್ತಗಿರಿ - Karavali Times ಕನ್ಯಾನ : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು, ಮೂವರು ಆರೋಪಿಗಳ ದಸ್ತಗಿರಿ - Karavali Times

728x90

27 June 2024

ಕನ್ಯಾನ : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು, ಮೂವರು ಆರೋಪಿಗಳ ದಸ್ತಗಿರಿ

ಬಂಟ್ವಾಳ, ಜೂನ್ 27, 2024 (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು ಜಾನುವಾರು ಸಹಿತ ಮೂವರನ್ನು ದಸ್ತಗಿರಿ ಮಾಡಿದ ಘಟನೆ ಕನ್ಯಾನ ಗ್ರಾಮದ ಶಿವಶಕ್ತಿ ಬಾರ್ ಬಳಿ ಬುಧವಾರ ಸಂಜೆ ಸಂಭವಿಸಿದೆ. 

ಬಂಧಿತ ಆರೋಪಿಗಳನ್ನು ಪಿಕಪ್ ಚಾಲಕ ಮೊಹಮ್ಮದ್, ಪುರುಷೋತ್ತಮ ಹಾಗೂ ಯೋಗೀಶ್ ಎಂದು ಹೆಸರಿಸಲಾಗಿದೆ. ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರತ್ನಕುಮಾರ್ ನೇತೃತ್ವದ ಪೊಲೀಸರು ಬುಧವಾರ ಸಂಜೆ  ಕನ್ಯಾನ ಗ್ರಾಮದ ಕನ್ಯಾನ ಶಿವಶಕ್ತಿ ಬಾರ್ ಬಳಿ ದೇಲಂತಬೆಟ್ಟು ಕಡೆಯಿಂದ ಸಂಶಯಾಸ್ಪದವಾಗಿ ಬಂದ ಮಹೇಂದ್ರ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಚಾಲಕ ಮೊಹಮ್ಮದ್ ಎಂಬಾತ ಪುರುಷೋತ್ತಮ್ಮ ಹಾಗೂ ಯೋಗೀಶ್ ಎಂಬವರೊಂದಿಗೆ ಸೇರಿ ಹೋರಿಯೊಂದನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ವಧೆಮಾಡಿ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ, ಕೇರಳ ಕಡೆಗೆ ಸಾಗಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಮೂವರು ಆರೋಪಿಗಳನ್ನು, ಕೃತ್ಯಕ್ಕೆ ಬಳಸಿದ ವಾಹನ ಮತ್ತು ಜಾನುವಾರಿನೊಂದಿಗೆ ವಶಕ್ಕೆ ಪಡೆದ ವಿಟ್ಲ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕನ್ಯಾನ : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು, ಮೂವರು ಆರೋಪಿಗಳ ದಸ್ತಗಿರಿ Rating: 5 Reviewed By: karavali Times
Scroll to Top