ಬಿಳಿಯೂರು : ಮಲಗಿದಲ್ಲಿಯೇ ಮಹಿಳೆ ಸಾವು, ಕುತ್ತಿಗೆ ಅದುಮಿ ಕೊಲೆ ನಡೆಸಿರುವ ಶಂಕೆ, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಬಿಳಿಯೂರು : ಮಲಗಿದಲ್ಲಿಯೇ ಮಹಿಳೆ ಸಾವು, ಕುತ್ತಿಗೆ ಅದುಮಿ ಕೊಲೆ ನಡೆಸಿರುವ ಶಂಕೆ, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

17 June 2024

ಬಿಳಿಯೂರು : ಮಲಗಿದಲ್ಲಿಯೇ ಮಹಿಳೆ ಸಾವು, ಕುತ್ತಿಗೆ ಅದುಮಿ ಕೊಲೆ ನಡೆಸಿರುವ ಶಂಕೆ, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

 ಬಂಟ್ವಾಳ, ಜೂನ್ 18, 2024 (ಕರಾವಳಿ ಟೈಮ್ಸ್) : ತಾಯಿ ಮನೆಯಲ್ಲಿದ್ದ ಮಹಿಳೆಯೋರ್ವರು ರಾತ್ರಿ ಮನೆಯಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಬಿಳಿಯೂರು ಗ್ರಾಮದ ದರ್ಖಾಸು ಎಂಬಲ್ಲಿ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಯಾರೋ ಕುತ್ತಿಗೆ ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಮೃತ ಮಹಿಳೆಯನ್ನು ಮಾಣಿ ಗ್ರಾಮದ ನಿವಾಸಿ ವಿಠಲ ಪೈ ಯಾನೆ ಶೈಲೇಶ್ ಎಂಬವರ ಪತ್ನಿ ಹೇಮಾವತಿ (37) ಎಂದು ಹೆಸರಿಸಲಾಗಿದೆ. ಹೇಮಾವತಿ ಅವರು ತಾಯಿ ಮನೆಯಾದ ಬಿಳಿಯೂರು ಗ್ರಾಮದ ದರ್ಖಾಸು ಎಂಬಲ್ಲಿ ವಾಸ್ತವ್ಯವಿದ್ದು, ಜೂನ್ 17  ರಂದು ಬೆಳಿಗ್ಗೆ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿ ಬಂದ ಮಾಹಿತಿ ಮೇರೆಗೆ ಆಕೆಯ ಪತಿ ವಿಠಲ ಪೈ ಅವರು ಹೆಂಡತಿಯ ಮನೆಯಾದ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ದರ್ಖಾಸು ಎಂಬಲ್ಲಿಗೆ ಬಂದು ನೋಡಿದಾಗ, ಹೆಂಡತಿಯ ಮೃತದೇಹದಲ್ಲಿದ್ದ ಗಾಯದ ಗುರುತುಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. 

ಜೂನ್ 16 ರಂದು ಮೃತ ಹೇಮಾವತಿ ಅವರ ಅಕ್ಕನ ಮಗ ಮಂಜು ಪ್ರಸಾದ್ ಎಂಬಾತ ಮನೆಗೆ ಬಂದಿದ್ದು, ರಾತ್ರಿ ಹೇಮಾವತಿ, ತಾಯಿ ಎಲ್ಲರೂ ರಾತ್ರಿ ಊಟ ಮಾಡಿ ಮಲಗಿದ್ದು, ಹೇಮಾವತಿಯನ್ನು ಜೂನ್  16 ರಂದು ರಾತ್ರಿಯಿಂದ ಜೂನ್ 17 ರ ಬೆಳಿಗ್ಗಿನ ಜಾವದ ಮಧ್ಯದ ಅವಧಿಯಲ್ಲಿ, ಯಾರೋ ವ್ಯಕ್ತಿಗಳು ಕುತ್ತಿಗೆಯನ್ನು ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2024 ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಿಳಿಯೂರು : ಮಲಗಿದಲ್ಲಿಯೇ ಮಹಿಳೆ ಸಾವು, ಕುತ್ತಿಗೆ ಅದುಮಿ ಕೊಲೆ ನಡೆಸಿರುವ ಶಂಕೆ, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top