ಬೆಳ್ತಂಗಡಿ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಕಾರು, ಸವಾರರಿಬ್ಬರು ಆಸ್ಪತ್ರೆಗೆ - Karavali Times ಬೆಳ್ತಂಗಡಿ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಕಾರು, ಸವಾರರಿಬ್ಬರು ಆಸ್ಪತ್ರೆಗೆ - Karavali Times

728x90

15 June 2024

ಬೆಳ್ತಂಗಡಿ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಕಾರು, ಸವಾರರಿಬ್ಬರು ಆಸ್ಪತ್ರೆಗೆ

ಬೆಳ್ತಂಗಡಿ, ಜೂನ್ 16, 2024 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಎರಡು ದ್ವಿಚಕ್ರ ವಾಹನಗಳ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಲಾಯಿಲಾ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ. 

ಗಾಯಗೊಂಡ ಬೈಕ್ ಸವಾರರನ್ನು ಬಂಟ್ವಾಳ ತಾಲೂಕು, ಸಂಗಬೆಟ್ಟು ನಿವಾಸಿ ಸಂತೋಷ್ ನಾಯ್ಕ್ (31) ಹಾಗೂ ಇನ್ನೊಂದು ಬೈಕ್ ಸವಾರ ಅಜಿತ್ ಎಂದು ಹೆಸರಿಸಲಾಗಿದೆ. 

ಸಂತೋಷ್ ಹಾಗೂ ಅಜಿತ್ ಅವರು ತಮ್ಮ ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಗಣೇಶ್ ಸಪಲ್ಯ ಎಂಬವರು ಚಲಾಯಿಸಿಕೊಂಡು ಬಂದ ಕಾರು ಎರಡೂ ಬೈಕುಗಳಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಎರಡೂ ಬೈಕ್ ಸವಾರರಿಗೆ ಗಾಯಗಳಾಗಿವೆ. ಗಾಯಾಳು ಬೈಕ್ ಸವಾರರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೈಕ್ ಸವಾರ ಸಂತೋಷ್ ನಾಯ್ಕ್ ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಕಾರು, ಸವಾರರಿಬ್ಬರು ಆಸ್ಪತ್ರೆಗೆ Rating: 5 Reviewed By: karavali Times
Scroll to Top