ಅಝೀಝ್ ಬೊಳ್ಳಾಯಿ ನಿಧನಕ್ಕೆ ಮಾಜಿ ಸಚಿವ ರೈ ಸಹಿತ ಗಣ್ಯರಿಂದ ಅಂತಿಮ ದರ್ಶನ, ಸಂತಾಪ ಸೂಚನೆ - Karavali Times ಅಝೀಝ್ ಬೊಳ್ಳಾಯಿ ನಿಧನಕ್ಕೆ ಮಾಜಿ ಸಚಿವ ರೈ ಸಹಿತ ಗಣ್ಯರಿಂದ ಅಂತಿಮ ದರ್ಶನ, ಸಂತಾಪ ಸೂಚನೆ - Karavali Times

728x90

18 January 2024

ಅಝೀಝ್ ಬೊಳ್ಳಾಯಿ ನಿಧನಕ್ಕೆ ಮಾಜಿ ಸಚಿವ ರೈ ಸಹಿತ ಗಣ್ಯರಿಂದ ಅಂತಿಮ ದರ್ಶನ, ಸಂತಾಪ ಸೂಚನೆ

ಬಂಟ್ವಾಳ, ಜನವರಿ 18, 2024 (ಕರಾವಳಿ ಟೈಮ್ಸ್) : ಹಠಾತ್ ಅನಾರೋಗ್ಯದಿಂದ ಗುರುವಾರ ಮಧ್ಯಾಹ್ನ ಮೃತಪಟ್ಟ ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯ, ಬೊಳ್ಳಾಯಿ ನಿವಾಸಿ ಹಾಜಿ ಅಬ್ದುಲ್ ಅಝೀಝ್ ಬಿಐಬಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಮೃತ ಅಝೀಝ್ ಅವರ ಮನೆಗೆ ಮಾಜಿ ಸಚಿವ ಬಿ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಕೊಳ್ನಾಡು ಗ್ರಾ ಪಂ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸಜಿಪಮೂಡ ಗ್ರಾ ಪಂ ಮಾಜಿ ಸದಸ್ಯ ಗಣಪತಿ ಭಟ್ ಸಹಿತ ಹಲವು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಅಝೀಝ್ ಬೊಳ್ಳಾಯಿ ನಿಧನಕ್ಕೆ ಮಾಜಿ ಸಚಿವ ರೈ ಸಹಿತ ಗಣ್ಯರಿಂದ ಅಂತಿಮ ದರ್ಶನ, ಸಂತಾಪ ಸೂಚನೆ Rating: 5 Reviewed By: karavali Times
Scroll to Top