ಮರಳು ಕದ್ದು ಲಾರಿಯಲ್ಲಿ ಸಾಗಾಟ ಪ್ರಕರಣ ಬೇಧಿಸಿದ ಬೆಳ್ತಂಗಡಿ ಪೊಲೀಸ್ - Karavali Times ಮರಳು ಕದ್ದು ಲಾರಿಯಲ್ಲಿ ಸಾಗಾಟ ಪ್ರಕರಣ ಬೇಧಿಸಿದ ಬೆಳ್ತಂಗಡಿ ಪೊಲೀಸ್ - Karavali Times

728x90

27 December 2023

ಮರಳು ಕದ್ದು ಲಾರಿಯಲ್ಲಿ ಸಾಗಾಟ ಪ್ರಕರಣ ಬೇಧಿಸಿದ ಬೆಳ್ತಂಗಡಿ ಪೊಲೀಸ್

 ಬೆಳ್ತಂಗಡಿ, ಡಿಸೆಂಬರ್ 28, 2023 (ಕರಾವಳಿ ಟೈಮ್ಸ್) : ಮರಳು ಕದ್ದು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ ಘಟನೆ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಬುಧವಾರ (ಡಿ 27) ಬೆಳಿಗ್ಗೆ ನಡೆದಿದೆ.

ಬುಧವಾರ ಬೆಳಿಗ್ಗೆ ಬೆಳ್ತಂಗಡಿ‌ ಪೊಲೀಸ್ ಠಾಣಾ ಪಿಎಸ್ಸೈ ಧನರಾಜ್‌ ಟಿ ಎಂ ನೇತೃತ್ವದ ಪೊಲೀಸರು ಕುವೆಟ್ಟು  ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ, ಕೆಎ-21-ಬಿ-5262 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದಾಗ, ಲಾರಿ ಚಾಲಕ ರಂಜಿತ್‌ ಎಂಬಾತ ಲಾರಿಯನ್ನು ನಿಲ್ಲಿಸಿ ತನ್ನ ಸಹಚರ ರಾಧಾಕೃಷ್ಣ  ಕಡಿರುದ್ಯಾವರ ಎಂಬಾತನೊಂದಿಗೆ ಸ್ಥಳದಿಂದ ಓಡಿ  ಹೋಗಿದ್ದಾರೆ. ಲಾರಿಯನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಯಾವುದೇ ದಾಖಲಾತಿ ಇಲ್ಲದೆ  ಚಾಲಕ ಹಾಗೂ ಸಹಚರ ಎಲ್ಲಿಂದಲೋ ಕಳವು ಮಾಡಿಕೊಂಡು ಬಂದ ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಮರಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡಿರುವುದು ಪತ್ತೆಯಾಗಿದೆ.

 ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 122/2023 ಕಲಂ 379  IPC ಯಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮರಳು ಕದ್ದು ಲಾರಿಯಲ್ಲಿ ಸಾಗಾಟ ಪ್ರಕರಣ ಬೇಧಿಸಿದ ಬೆಳ್ತಂಗಡಿ ಪೊಲೀಸ್ Rating: 5 Reviewed By: lk
Scroll to Top