ಅಕ್ಷರ ದಾಸೋಹ ನೌಕರರಿಗೆ ಚುಣಾವಣೆ ಸಂದರ್ಭ ನೀಡಿದ ಭರವಸೆ ತಕ್ಷಣ ಈಡೇರಿಸದಿದ್ದಲ್ಲಿ ತೀವ್ರ ಹೋರಾಟ : ರಾಮಣ್ಣ ವಿಟ್ಲ ಎಚ್ಚರಿಕೆ - Karavali Times ಅಕ್ಷರ ದಾಸೋಹ ನೌಕರರಿಗೆ ಚುಣಾವಣೆ ಸಂದರ್ಭ ನೀಡಿದ ಭರವಸೆ ತಕ್ಷಣ ಈಡೇರಿಸದಿದ್ದಲ್ಲಿ ತೀವ್ರ ಹೋರಾಟ : ರಾಮಣ್ಣ ವಿಟ್ಲ ಎಚ್ಚರಿಕೆ - Karavali Times

728x90

7 November 2023

ಅಕ್ಷರ ದಾಸೋಹ ನೌಕರರಿಗೆ ಚುಣಾವಣೆ ಸಂದರ್ಭ ನೀಡಿದ ಭರವಸೆ ತಕ್ಷಣ ಈಡೇರಿಸದಿದ್ದಲ್ಲಿ ತೀವ್ರ ಹೋರಾಟ : ರಾಮಣ್ಣ ವಿಟ್ಲ ಎಚ್ಚರಿಕೆ

ಬಿ.ಸಿ.ರೋಡಿನಲ್ಲಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ


ಬಂಟ್ವಾಳ, ನವೆಂಬರ್ 07, 2023 (ಕರಾವಳಿ ಟೈಮ್ಸ್) : ಅಕ್ಷರ ದಾಸೋಹ ನೌಕರರು ಕಳೆದ ಇಪ್ಪತ್ತು ವರ್ಷಗಳಿಂದ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು, 3 ತಿಂಗಳಿಂದ ಸಂಬಳ ನೀಡದೆ ಸತಾಯಿಸಲಾಗುತ್ತಿದೆ. ಚುನಾವಣೆ ಸಂದರ್ಭ ಸಂಬಳ ಏರಿಕೆ ಮಾಡುವುದಾಗಿ ಭರವಸೆ ನೀಡಲಾಗಿದ್ದರೂ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಇದುವರೆಗೂ ಭರವಸೆ ಈಡೇರಿಸುವಲ್ಲಿ ಕ್ರಮ ಕೈಗೊಂಡಿಲ್ಲ. ಸರಕಾರ ತಕ್ಷಣ ಬಿಸಿಯೂಟ ನೌಕರರ ವೇತನ ಏರಿಕೆ ಮಾಡದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಐಸಿಸಿಟಿಯು ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ ಎಚ್ಚರಿಸಿದರು. 

ಅಕ್ಷರ ದಾಸೋಹ  ನೌಕರರಿಗೆ ಚುನಾವಣೆ ಸಂದರ್ಭದಲ್ಲಿ ಸಂಬಳ ಏರಿಕೆ ಮಾಡುವ ಬಗ್ಗೆ ನೀಡಿದ ಭರವಸೆಯನ್ನು ಕೂಡಲೇ ಈಡೇರಿಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ  (ಎಐಸಿಸಿಟಿಯು) ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. 

ಪ್ರತಿಭಟನೆ ವೇಳೆ ಹಾಗೂ ಮನವಿಯಲ್ಲಿ ಬಜೆಟಿನಲ್ಲಿ ಅಕ್ಷರ ದಸೋಹ ನೌಕರರ ಬಾಕಿ ಇರುವ ವೇತನ ಹಾಗೂ,  ಚುನಾವಣೆ ಸಂದರ್ಭ ಭರವಸೆ ನೀಡಿದ 6 ಸಾವಿರ ರೂಪಾಯಿ ವೇತನ ಜಾರಿ ಮಾಡಬೇಕು., 2022 ರಿಂದ 60 ವರ್ಷ ಆಗಿದೆ ಎಂದು ತೆಗೆದಿರುವ ಎಲ್ಲರಿಗೂ 1 ಲಕ್ಷ ರೂಪಾಯಿ ಇಡುಗಂಟು ನೀಡಬೇಕು, 60 ವರ್ಷದ ನಂತರ ನಿವೃತಿಯಾದವರಿಗೂ 1 ಲಕ್ಷ ರೂಪಾಯಿ ಇಡುಗಂಟು ಕೊಡುವ ಯೋಜನೆಗೆ ಹಣಕಾಸು ಇಲಾಖೆಗೆ ಒಪ್ಪಿಸಿ ಜಾರಿ ಮಾಡಬೇಕು, ಸಾದಿಲ್ವಾರು ಜಂಟಿ  ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್ ಡಿ ಎಂ ಸಿ ಗೆ ಗೆ ವರ್ಗಾವನೆ ಮಾಡಿರುವ ಕ್ರಮ ವಾಪಾಸ್ಸಾಗಬೇಕು. ಸಾದಿಲ್ವಾರು ಖಾತೆ ಮೊದಲಿನಂತೆ ಬದಲಾಯಿಸಬೇಕು., ಅಕ್ಷರ ದಸೋಹ ಯೋಜನೆ ಸಂಪೂರ್ಣವಾಗಿ  ಶಿಕ್ಷಣ ಇಲಾಖೆಯ ಯೊಜನೆಯಡಿಯಲ್ಲಿಯೇ ನಡೆಯಬೇಕು., ಮಾರ್ಚ್ 31, 2023ಕ್ಕೆ ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆ ಬದಲಾಯಿಸಿ ಎಪ್ರಿಲ್ 10, 2023ಕ್ಕೆ ಮರು ಆದೇಶ ನೀಡಬೇಕು., ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ 25 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು., ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು., ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು., ಖಾಯಂ ಮಾಡುವ ತನಕ 45 ಮತ್ತು 46ನೇ ಬಾರತೀಯ ಕಾರ್ಮಿಕ  ಸಮ್ಮೇಳನದ ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರೆಂದು ಗುರುತಿಸಬೇಕು., ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಸ್ವರೂಪದ ಜವಾಬ್ದಾರಿ ಕೊಡಬಾರದು., ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹ ಕೈÀಪಿಡಿಯಲ್ಲಿ ಬದಲಾಯಿಸಬೇಕು., ಶಾಲೆಗಳಲ್ಲಿ ಡಿ ಗ್ರೂಪ್ ನೌಕರರಿ ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಅದೇಶ ನೀಡಬೇಕು., ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಡ್ಡಾಯ ನೀಡಬೇಕು., ಶಾಲಾ ಅವಧಿಯ ನಂತರ ನರೆಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸ ಇವರಿಗೆ ನೀಡಿದ ಯೋಜನೆಯಿಂದ ವೇತನ ನೀಡುವುದು., ಅಪಘತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದಬರಿಗೆ ಕೆಲಸ  ನೀಡಬೇಕು., ನಿವೃತಿ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದಬರಿಗೆ ಕೆಲಸ ನೀಡಬೇಕು., ಪ್ರತಿ ಶಾಲೆಯಲ್ಲಿ ಕನಿಷ್ಟ ಎರಡು ಜನ ಅಡುಗೆಯವರು ಇರಲೇಬೇಕು ಮೊದಲಾದ ಬೇಡಿಕೆಗಳನ್ನು ಸರಕಾರದ ಮುಂದಿಡಲಾಗಿದೆ.  

ಸಂಘದ ತಾಲೂಕು ಅಧ್ಯಕ್ಷೆ ಜಯಶ್ರೀ ಆರ್ ಕೆ, ಕಾರ್ಯದರ್ಶಿ ವಾಣಿಶ್ರೀ, ಪ್ರಮುಖರಾದ ಜಯಂತಿ ಶಂಭೂರು, ವಾಣಿಶ್ರೀ, ವಿನಯ ನಡುಮೊಗರು, ಮಮತಾ ಬಿಳಿಯೂರು, ಯಶೋಧ, ರೇಖಾ, ಶಕುಂತಳಾ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬಳಿಕ ತಾಲೂಕು ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಅಕ್ಷರ ದಾಸೋಹ ನೌಕರರಿಗೆ ಚುಣಾವಣೆ ಸಂದರ್ಭ ನೀಡಿದ ಭರವಸೆ ತಕ್ಷಣ ಈಡೇರಿಸದಿದ್ದಲ್ಲಿ ತೀವ್ರ ಹೋರಾಟ : ರಾಮಣ್ಣ ವಿಟ್ಲ ಎಚ್ಚರಿಕೆ Rating: 5 Reviewed By: karavali Times
Scroll to Top