ವಿಧಾನಸಭಾ ಚುನಾವಣೆ ಸೋತು ಬರೋಬ್ಬರಿ 6 ತಿಂಗಳ ಬಳಿಕ ಕೊನೆಗೂ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಿಸಿ ಆದೇಶ ಹೊರಡಿಸಿದ ಹೈಕಮಾಂಡ್ : ಮಾಜಿ ಸಿಎಂ ಪುತ್ರನಿಗೆ ಪಟ್ಟಾಭಿಷೇಕ - Karavali Times ವಿಧಾನಸಭಾ ಚುನಾವಣೆ ಸೋತು ಬರೋಬ್ಬರಿ 6 ತಿಂಗಳ ಬಳಿಕ ಕೊನೆಗೂ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಿಸಿ ಆದೇಶ ಹೊರಡಿಸಿದ ಹೈಕಮಾಂಡ್ : ಮಾಜಿ ಸಿಎಂ ಪುತ್ರನಿಗೆ ಪಟ್ಟಾಭಿಷೇಕ - Karavali Times

728x90

10 November 2023

ವಿಧಾನಸಭಾ ಚುನಾವಣೆ ಸೋತು ಬರೋಬ್ಬರಿ 6 ತಿಂಗಳ ಬಳಿಕ ಕೊನೆಗೂ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಿಸಿ ಆದೇಶ ಹೊರಡಿಸಿದ ಹೈಕಮಾಂಡ್ : ಮಾಜಿ ಸಿಎಂ ಪುತ್ರನಿಗೆ ಪಟ್ಟಾಭಿಷೇಕ

ಬೆಂಗಳೂರು, ನವೆಂಬರ್ 10, 2023 (ಕರಾವಳಿ ಟೈಮ್ಸ್) : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಖಾಲಿ ಬಿದ್ದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಬರೋಬ್ಬರಿ ಆರು ತಿಂಗಳ ಬಳಿಕ ಕೊನೆಗೂ ನೂತನ ಅಧ್ಯಕ್ಷರನ್ನು ಬಿಜೆಪಿ ಹೈಕಮಾಂಡ್ ನೇಮಿಸಿ ಶುಕ್ರವಾರ ಆದೇಶ ಹೊರಡಿಸಿದೆ. 

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರ ಕ್ಷೇತ್ರದ ಶಾಸಕ ಬಿ ವೈ ವಿಜಯೇಂದ್ರ ಅವರನ್ನು ನೇಮಿಸಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು ತಕ್ಷಣ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಿದ್ದಾರೆ. 

ಕಳೆದ ವಿಧಾನಸಭಾ ಚುನಾವಣೆ ಸೋಲಿನ ಹೊಣೆ ಹೊತ್ತು ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಬಿದ್ದಿತ್ತು. ಈ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ ಟಿ ರವಿ ಸಹಿತ ಕೆಲವೊಂದು ಹೆಸರುಗಳು ಕೇಳಿ ಬಂದಿತ್ತು. 

ಕಳೆದ ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಮಾಜಿ ಸಿಎಂ ಅವರನ್ನು ಓಲೈಕೆ ಮಾಡುವ ಹಾಗೂ ರಾಜ್ಯ ರಾಜಕೀಯದಲ್ಲಿ ಪ್ರಬಲ ಜಾತಿಯಾಗಿರುವ ಲಿಂಗಾಯತ ಜನಾಂಗವನ್ನು ಮುಂಬರುವ ಲೋಕಸಭಾ ಚುನಾವಣೆಗೆ ಮತಬ್ಯಾಂಕ್ ಆಗಿ ಉಳಿಸಿಕೊಳ್ಳುವ ಉದ್ದೇಶವನ್ನೂ ಈ ಆಯ್ಕೆಯ ಹಿಂದೆ ಇಟ್ಟುಕೊಳ್ಳಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಿಧಾನಸಭಾ ಚುನಾವಣೆ ಸೋತು ಬರೋಬ್ಬರಿ 6 ತಿಂಗಳ ಬಳಿಕ ಕೊನೆಗೂ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಿಸಿ ಆದೇಶ ಹೊರಡಿಸಿದ ಹೈಕಮಾಂಡ್ : ಮಾಜಿ ಸಿಎಂ ಪುತ್ರನಿಗೆ ಪಟ್ಟಾಭಿಷೇಕ Rating: 5 Reviewed By: karavali Times
Scroll to Top