ಕೊಕ್ಕಡ : ಬ್ಯಾಂಕ್ ಹೆಸರಲ್ಲಿ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡು ವಂಚನೆ : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಕೊಕ್ಕಡ : ಬ್ಯಾಂಕ್ ಹೆಸರಲ್ಲಿ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡು ವಂಚನೆ : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

23 October 2023

ಕೊಕ್ಕಡ : ಬ್ಯಾಂಕ್ ಹೆಸರಲ್ಲಿ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡು ವಂಚನೆ : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ, ಅಕ್ಟೋಬರ್ 23, 2023 (ಕರಾವಳಿ ಟೈಮ್ಸ್) : ಬ್ಯಾಂಕಿನ ಹೆಸರಿನಲ್ಲಿ ಒಟಿಪಿ ಪಡೆದು ಮಹಿಳೆಯೋರ್ವರಿಂದ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ವರದಿಯಾಗಿದೆ. 

ಕೊಕ್ಕಡ ನಿವಾಸಿ ಹರಿಣಿ (40) ಎಂಬವರು ವಾರದ ಹಿಂದೆ ಜಮೀನು ಮಾರಾಟ ಮಾಡಿದ ಹಣವನ್ನು ಬ್ಯಾಂಕಿನಲ್ಲಿ ಜಮೆ  ಮಾಡಿದ್ದು, ಸದರಿ ಬ್ಯಾಂಕ್ ಅಧಿಕಾರಿಗಳ ರೀತಿಯಲ್ಲಿ ವ್ಯವಹರಿಸಿದ ಅಪರಿಚಿತರು ಅ 21 ರಂದು ಅಪರಾಹ್ನ ಹರಿಣಿ ಅವರಿಂದ ಒಟಿಪಿ ಕೇಳಿ ಪಡೆದುಕೊಂಡು ಬ್ಯಾಂಕ್ ಖಾತೆಯಿಂದ 1,46,900/- ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2023 ಕಲಂ 419, 420 ಐಪಿಸಿ ಮತ್ತು ಕಲಂ 66(ಸಿ) 66(ಡಿ) ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊಕ್ಕಡ : ಬ್ಯಾಂಕ್ ಹೆಸರಲ್ಲಿ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡು ವಂಚನೆ : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top