ಉಜಿರೆ ಹೋಲೋಬ್ಲಾಕ್ ಕಂಪೆನಿ ರೈಟರ್ ಆತ್ಮಹತ್ಯೆಗೆ ಶರಣು - Karavali Times ಉಜಿರೆ ಹೋಲೋಬ್ಲಾಕ್ ಕಂಪೆನಿ ರೈಟರ್ ಆತ್ಮಹತ್ಯೆಗೆ ಶರಣು - Karavali Times

728x90

2 September 2023

ಉಜಿರೆ ಹೋಲೋಬ್ಲಾಕ್ ಕಂಪೆನಿ ರೈಟರ್ ಆತ್ಮಹತ್ಯೆಗೆ ಶರಣು

ಧರ್ಮಸ್ಥಳ, ಸೆಪ್ಟೆಂಬರ್ 02, 2023 (ಕರಾವಳಿ ಟೈಮ್ಸ್) : ಉಜಿರೆಯ ಹಾಲೋಬ್ಲಾಕ್ ಕಂಪೆನಿಯಲ್ಲಿ ರೈಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕು, ಧರ್ಮಸ್ಥಳ ಗ್ರಾಮದ ನಿವಾಸಿ ಸತೀಶ್ ಪೂಜಾರಿ ಅವರ ಪುತ್ರ ಸ್ವರಾಜ್ (24) ಅವರು ಪುದುವೆಟ್ಟು ಗ್ರಾಮದ ಬಾಯತ್ಯಾರು ಎಂಬಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಸ್ವರಾಜ್ ಅವರು ಎಂದಿನಂತೆ ಆಗಸ್ಟ್ 31 ರಂದು ಬೆಳಿಗ್ಗೆ ಕೂಡಾ ಕಛೇರಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು. ಆದರೆ ಬಳಿಕ ಪುದುವೆಟ್ಟು ಗ್ರಾಮದ ಬಾಯತ್ಯಾರು ಎಂಬಲ್ಲಿ ನೇಣು ಬಿಗಿದುಕೊಂಡು  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಮೃತರ ತಂದೆ ಸತೀಶ್ ಪೂಜಾರಿ ನೀಡಿರುವ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 64/2023 ಕಲಂ 174 ಸಿ ಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 


  • Blogger Comments
  • Facebook Comments

0 comments:

Post a Comment

Item Reviewed: ಉಜಿರೆ ಹೋಲೋಬ್ಲಾಕ್ ಕಂಪೆನಿ ರೈಟರ್ ಆತ್ಮಹತ್ಯೆಗೆ ಶರಣು Rating: 5 Reviewed By: karavali Times
Scroll to Top