ಧಾರ್ಮಿಕ ಗುರು ಶೈಖುನಾ ಮಂಚಿ ಉಸ್ತಾದ್ ಅವರಿಗೆ ಸಹೋದರ ವಿಯೋಗ - Karavali Times ಧಾರ್ಮಿಕ ಗುರು ಶೈಖುನಾ ಮಂಚಿ ಉಸ್ತಾದ್ ಅವರಿಗೆ ಸಹೋದರ ವಿಯೋಗ - Karavali Times

728x90

22 July 2023

ಧಾರ್ಮಿಕ ಗುರು ಶೈಖುನಾ ಮಂಚಿ ಉಸ್ತಾದ್ ಅವರಿಗೆ ಸಹೋದರ ವಿಯೋಗ

ಮಂಚಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮೊಯಿದಿನ್ ಕುಂಞÂ ನಾಡಾಜೆ ಇನ್ನಿಲ್ಲ


ಬಂಟ್ವಾಳ, ಜುಲೈ 23, 2023 (ಕರಾವಳಿ ಟೈಮ್ಸ್) : ಮಂಚಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮೊಯಿದಿನ್ ಕುಂಞÂ ನಾಡಾಜೆ (62) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾದರು.

ಸ್ಥಳೀಯ ಕಾಂಗ್ರೆಸ್ ನಾಯಕರಾಗಿದ್ದ ಇವರು 3 ಅವಧಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ನಾಡಾಜೆ ಮಸೀದಿಯಲ್ಲಿ ಮತ್ತು ಮಂಚಿ ಎಸ್ ವೈ ಎಸ್, ಮುಸ್ಲಿಂ ಸಂಯುಕ್ತ ಜಮಾಅತ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದರು. 

ಚಿರಪರಿಚಿತ ಧರ್ಮ ಗುರು ಶೈಖುನಾ ಮಂಚಿ ಉಸ್ತಾದ್ ಇಬ್ರಾಹಿಂ ಮುಸ್ಲಿಯಾರ್ ಅವರ ಸಹೋದರನಾಗಿರುವ ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಮೃತರ ದಫನ ಕಾರ್ಯವು ಕುಕ್ಕಾಜೆ ಕೇಂದ್ರ ಜುಮಾ ಮಸೀದಿಯಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಗಣ್ಯರ ಸಂತಾಪ 

ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ತೀವ್ರ ಸಂತಾಪ ಸೂಚಿಸಿದರು. ಮಾಜಿ ಸಚಿವ ಬಿ ರಮಾನಾಥ ರೈ, ಕಾಂಗ್ರೆಸ್ ಮುಖಂಡರುಗಳಾದ ಮಮತಾ ಡಿ ಎಸ್ ಗಟ್ಟಿ, ಎಂ ಎಸ್ ಮುಹಮ್ಮದ್, ಚಂದ್ರಹಾಸ ಕರ್ಕೇರ, ಬಿ ಎಂ ಅಬ್ಬಾಸ್ ಅಲಿ, ಅಬ್ದುಲ್ ರಝಾಕ್ ಕುಕ್ಕಾಜೆ, ಹಸೈನಾರ್ ಸಾಲೆತ್ತೂರು, ಸುಭಾಶ್ ಚಂದ್ರ ಕೊಳ್ನಾಡು ಮೊದಲಾದ ಗಣ್ಯರು ಮೊಯಿದಿನ್ ಕುಂಞÂ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಧಾರ್ಮಿಕ ಗುರು ಶೈಖುನಾ ಮಂಚಿ ಉಸ್ತಾದ್ ಅವರಿಗೆ ಸಹೋದರ ವಿಯೋಗ Rating: 5 Reviewed By: karavali Times
Scroll to Top