ನಂದಾವರ ಗುಡ್ಡ ಕುಸಿತ ಸಂತ್ರಸ್ತರನ್ನು ಭೇಟಿಯಾದ ಕೆಪಿಸಿಸಿ ಮುಖಂಡ ಅಶ್ವನಿ ಕುಮಾರ್ ನಿಯೋಗ - Karavali Times ನಂದಾವರ ಗುಡ್ಡ ಕುಸಿತ ಸಂತ್ರಸ್ತರನ್ನು ಭೇಟಿಯಾದ ಕೆಪಿಸಿಸಿ ಮುಖಂಡ ಅಶ್ವನಿ ಕುಮಾರ್ ನಿಯೋಗ - Karavali Times

728x90

8 July 2023

ನಂದಾವರ ಗುಡ್ಡ ಕುಸಿತ ಸಂತ್ರಸ್ತರನ್ನು ಭೇಟಿಯಾದ ಕೆಪಿಸಿಸಿ ಮುಖಂಡ ಅಶ್ವನಿ ಕುಮಾರ್ ನಿಯೋಗ

ಬಂಟ್ವಾಳ, ಜುಲೈ 08, 2023 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರ-ಗುಂಪುಮನೆಯಲ್ಲಿ ಶುಕ್ರವಾರ ಬೆಳಿಗ್ಗೆ ಮನೆ ಮೇಲೆ ಗುಡ್ಡ ಕುಸಿದು ಮಹಿಳೆ ಮೃತಪಟ್ಟ ಘಟನಾ ಸ್ಥಳಕ್ಕೆ ಹಾಗೂ ಅವರ ಗಾಯಾಳು ಪುತ್ರಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಕೆಪಿಸಿಸಿ ಮುಖಂಡ, ಬಂಟ್ವಾಳದ ಹಿರಿಯ ನೋಟರಿ-ನ್ಯಾಯವಾದಿ ಎಂ ಅಶ್ವನಿ ಕುಮಾರ್ ರೈ ನೇತೃತ್ವ ನಿಯೋಗ ಭೇಟಿ ನೀಡಿ ಸಂತ್ರಸ್ತ ತಂದೆ ಮುಹಮ್ಮದ್ ಅವರಿಗೆ ಸಾಂತ್ವನ ಹೇಳಿದರಲ್ಲದೆ ಆರ್ಥಿಕ ನೆರವನ್ನೂ ಹಸ್ತಾಂತರಿಸಿದರು. 

ಬಂಟ್ವಾಳ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕೈಲಾರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಂದಾವರ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ನಂದಾವರ ಗುಡ್ಡ ಕುಸಿತ ಸಂತ್ರಸ್ತರನ್ನು ಭೇಟಿಯಾದ ಕೆಪಿಸಿಸಿ ಮುಖಂಡ ಅಶ್ವನಿ ಕುಮಾರ್ ನಿಯೋಗ Rating: 5 Reviewed By: karavali Times
Scroll to Top