ನಿವೃತ್ತ ಬಂಟ್ವಾಳ ಲೋಕೋಪಯೋಗಿ ಇಲಾಖಾ ಸಹಾಯಕ ಇಂಜಿನಿಯರ್ ಅಮೃತ ಕುಮಾರಗೆ ಬೀಳ್ಕೊಡುಗೆ - Karavali Times ನಿವೃತ್ತ ಬಂಟ್ವಾಳ ಲೋಕೋಪಯೋಗಿ ಇಲಾಖಾ ಸಹಾಯಕ ಇಂಜಿನಿಯರ್ ಅಮೃತ ಕುಮಾರಗೆ ಬೀಳ್ಕೊಡುಗೆ - Karavali Times

728x90

9 June 2023

ನಿವೃತ್ತ ಬಂಟ್ವಾಳ ಲೋಕೋಪಯೋಗಿ ಇಲಾಖಾ ಸಹಾಯಕ ಇಂಜಿನಿಯರ್ ಅಮೃತ ಕುಮಾರಗೆ ಬೀಳ್ಕೊಡುಗೆ

ಬಂಟ್ವಾಳ, ಜೂನ್ 09, 2023 (ಕರಾವಳಿ ಟೈಮ್ಸ್) : ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 19 ವರ್ಷ ಸೇವೆ ಸಲ್ಲಿಸಿ ಇದೀಗ ಬಂಟ್ವಾಳ ಲೋಕೋಪಯೋಗಿ ಉಪವಿಭಾಗದಲ್ಲಿ ನಿವೃತ್ತಿ ಹೊಂದುತ್ತಿರುವ ಸಹಾಯಕ ಇಂಜಿನಿಯರ್ ಅಮೃತ್ ಕುಮಾರ್ ಸಿ ಆರ್ ಅವರ ಬೀಳ್ಕೊಡುಗೆ ಸಮಾರಂಭವು ಬಂಟ್ವಾಳ ಲೋಕೋಪಯೋಗಿ ಉಪವಿಭಾಗ ಸಭಾಂಣದಲ್ಲಿ ನಡೆಯಿತು. 

   ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜೈಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿ ಆರ್ ಇ ಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರನಾಥ ಸಾಲಿಯಾನ್, ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿ ಕೆ ನಾೈಕ್, ಸಹಾಯಕ ಅಭಿಯಂತರುಗಳಾದ ಪ್ರೀತಂ, ಮನೋಜ್, ವಿವೇಕಾನಂದ ರೆಡ್ಡಿ, ಅಮೃತ್ ಕುಮಾರ್ ಅವರ ಧರ್ಮಪತ್ನಿ ಕಲೈವಾಣಿ, ಪಿ ಆರ್ ಇ ಡಿ ಉಪವಿಭಾಗ ಅಭಿಯಂತರ ಕೃಷ್ಣ, ಜಗದೀಶ,  ಕುಶಕುಮಾರ್, ನಾಗೇಶ್, ಲೋಕೋಪಯೋಗಿ ಕಚೇರಿ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಭಾಗವಹಿಸಿದ್ದರು. ಇಂಜಿನಿಯರ್ ಅರುಣ್ ಪ್ರಕಾಶ್ ಸ್ವಾಗತಿಸಿ, ಮನೋಜ್ ವಂದಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ನಿವೃತ್ತ ಬಂಟ್ವಾಳ ಲೋಕೋಪಯೋಗಿ ಇಲಾಖಾ ಸಹಾಯಕ ಇಂಜಿನಿಯರ್ ಅಮೃತ ಕುಮಾರಗೆ ಬೀಳ್ಕೊಡುಗೆ Rating: 5 Reviewed By: karavali Times
Scroll to Top