ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ನಂದರಬೆಟ್ಟು ನಿತಿನ್ ಪೂಜಾರಿ ಆಯ್ಕೆ - Karavali Times ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ನಂದರಬೆಟ್ಟು ನಿತಿನ್ ಪೂಜಾರಿ ಆಯ್ಕೆ - Karavali Times

728x90

11 June 2023

ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ನಂದರಬೆಟ್ಟು ನಿತಿನ್ ಪೂಜಾರಿ ಆಯ್ಕೆ

ಬಂಟ್ವಾಳ, ಜೂನ್ 12, 2023 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ನಂದರಬೆಟ್ಟು ಸಮೀಪದ ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ ನೂತನ ಅಧ್ಯಕ್ಷರಾಗಿ ನಿತಿನ್ ಪೂಜಾರಿ ನಂದರಬೆಟ್ಟು ಅವರು ಆಯ್ಕೆಯಾಗಿದ್ದಾರೆ. 

ಭಾನುವಾರ (ಜೂನ್ 11) ಅಲೆತ್ತೂರು ಮಂಗಳಾ ಸಭಾಂಗಣದಲ್ಲಿ ನೇಮಿರಾಜ್ ಶೆಟ್ಟಿ ಕೊಡಂಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಥೆಯ 43ನೇ ಸಾಲಿನ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. 

ಉಪಾದ್ಯಕ್ಷರಾಗಿ ದಿನೇಶ್ ಸುವರ್ಣ, ಕಾರ್ಯದರ್ಶಿಯಾಗಿ ಪ್ರಶಾಂತ್, ಜೊತೆ ಕಾರ್ಯದರ್ಶಿಯಾಗಿ ಪವನ್ ಕುಲಾಲ್, ಸಂಘಟನಾ ಕಾರ್ಯದರ್ಶಿಯಾಗಿ ಪುಪ್ಪರಾಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ  ಅಕ್ಷಯ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಲೋಹಿತ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ್ ಕುಮಾರ್, ಭಾಸ್ಕರ್ ಕುಲಾಲ್, ವಾಸುದೇವ್, ವಿಶ್ವನಾಥ ಪೈ ಅವರನ್ನು ಆರಿಸಲಾಯಿತು. 

ಮೋನಪ್ಪ ಪೂಜಾರಿ ಅಲೆತ್ತೂರು, ಅಶ್ವಥ್ ಶೆಟ್ಟಿ, ಹಿಮಕರ ಪೂಜಾರಿ, ವಿಶ್ವನಾಥ ಪೂಜಾರಿ, ನಾರಾಯಣ ಪೂಜಾರಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ನಂದರಬೆಟ್ಟು ನಿತಿನ್ ಪೂಜಾರಿ ಆಯ್ಕೆ Rating: 5 Reviewed By: karavali Times
Scroll to Top