ಉಪ್ಪಿನಂಗಡಿ : ಕುಮಾರಾಧಾರ ನದಿ ಕಿನಾರೆ ಬಳಿ ವಿದ್ಯುತ್ ಸ್ಪರ್ಶಗೊಂಡು ಪಿಯುಸಿ ವಿದ್ಯಾರ್ಥಿ ದಾರುಣ ಸಾವು - Karavali Times ಉಪ್ಪಿನಂಗಡಿ : ಕುಮಾರಾಧಾರ ನದಿ ಕಿನಾರೆ ಬಳಿ ವಿದ್ಯುತ್ ಸ್ಪರ್ಶಗೊಂಡು ಪಿಯುಸಿ ವಿದ್ಯಾರ್ಥಿ ದಾರುಣ ಸಾವು - Karavali Times

728x90

22 May 2023

ಉಪ್ಪಿನಂಗಡಿ : ಕುಮಾರಾಧಾರ ನದಿ ಕಿನಾರೆ ಬಳಿ ವಿದ್ಯುತ್ ಸ್ಪರ್ಶಗೊಂಡು ಪಿಯುಸಿ ವಿದ್ಯಾರ್ಥಿ ದಾರುಣ ಸಾವು

ಪುತ್ತೂರು, ಮೇ 22, 2023 (ಕರಾವಳಿ ಟೈಮ್ಸ್) : ತಾಲೂಕಿನ, ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಕುಮಾರಧಾರ ನದಿ ಕಿನಾರೆಯ ಬಳಿ ವಿದ್ಯುತ್ ಸ್ಪರ್ಶವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶರಫುದ್ದೀನ್ (19) ಎಂಬಾತ ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ವೇಳೆ ನಡೆದಿದೆ. 

ಈ ಬಗ್ಗೆ ಪುತ್ತೂರು ತಾಲೂಕು, ಹಿರೇಬಂಡಾಡಿ ಗ್ರಾಮದ, ಪೆರಾಬೆ ನಿವಾಸಿ ಬಿ ಹಮ್ಮಬ್ಬ ಅವರು ಉಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಮ್ಮಬ್ಬ ಅವರ ಸಹೋದರಿ ಝುಹರಾ ಹಾಗೂ ಆಕೆಯ ಪುತ್ರ ಶರಫುದ್ದೀನ್ ಅವರ ಮನೆಯಲ್ಲಿರುತ್ತಿದ್ದು, ಶರಫುದ್ದೀನ್ ದ್ವಿತೀಯ ಪಿಯುಸಿ ಪಾಸಾಗಿದ್ದು, ಮೇ 21 ರಂದು ಭಾನುವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಕುಮಾರಾಧಾರಾ ನದಿ ಕಿನಾರೆಗೆ ಹೋಗಿದ್ದವನಿಗೆ ಆಕಸ್ಮಿಕ ವಿದ್ಯುತ್ ಸ್ಪರ್ಶಗೊಂಡು ಗಂಭೀರ ಗಾಯಗೊಂಡಿರುತ್ತಾನೆ. ತಕ್ಷಣ ಆತನನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. 

ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣಾ ಯುಡಿಆರ್ ನಂಬ್ರ 27/2023 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಉಪ್ಪಿನಂಗಡಿ : ಕುಮಾರಾಧಾರ ನದಿ ಕಿನಾರೆ ಬಳಿ ವಿದ್ಯುತ್ ಸ್ಪರ್ಶಗೊಂಡು ಪಿಯುಸಿ ವಿದ್ಯಾರ್ಥಿ ದಾರುಣ ಸಾವು Rating: 5 Reviewed By: karavali Times
Scroll to Top