ಪುತ್ತೂರು ಪೇಟೆಯಲ್ಲಿ ನಳಿನ್, ಸದಾನಂದ ಗೌಡ ಹೆಸರಿಲ್ಲಿ ಶ್ರದ್ದಾಂಜಲಿ ಬ್ಯಾನರ್ ಹಾಕಿದ ಪ್ರಕರಣ : ಇಬ್ಬರು ಪೊಲೀಸ್ ವಶ - Karavali Times ಪುತ್ತೂರು ಪೇಟೆಯಲ್ಲಿ ನಳಿನ್, ಸದಾನಂದ ಗೌಡ ಹೆಸರಿಲ್ಲಿ ಶ್ರದ್ದಾಂಜಲಿ ಬ್ಯಾನರ್ ಹಾಕಿದ ಪ್ರಕರಣ : ಇಬ್ಬರು ಪೊಲೀಸ್ ವಶ - Karavali Times

728x90

15 May 2023

ಪುತ್ತೂರು ಪೇಟೆಯಲ್ಲಿ ನಳಿನ್, ಸದಾನಂದ ಗೌಡ ಹೆಸರಿಲ್ಲಿ ಶ್ರದ್ದಾಂಜಲಿ ಬ್ಯಾನರ್ ಹಾಕಿದ ಪ್ರಕರಣ : ಇಬ್ಬರು ಪೊಲೀಸ್ ವಶ

ಪುತ್ತೂರು, ಮೇ 15, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರಸಭಾ ವ್ಯಾಪ್ತಿಯ ಕೆ ಎಸ್ ಆರ್ ಟಿಸಿ ಬಸ್ಸು ನಿಲ್ದಾಣದ ಎದುರು ಅರಣ್ಯ ಇಲಾಖಾ ಆವರಣ ಗೋಡೆ ಬಳಿ ಸೋಮವಾರ “ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ದಾಂಜಲಿ” ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರ ವಿರುದ್ದ ಅವಹೇಳನಕಾರಿ ಬರಹ ಇದ್ದ ಬ್ಯಾನರ್ ಪ್ರದರ್ಶಿಸಿಲಾಗಿತ್ತು. ಅಲ್ಲದೆ ಬ್ಯಾನರಿಗೆ ಚಪ್ಪಲಿ ಹಾರ ಹಾಕಿ ಅವಹೇಳನ ಮಾಡಲಾಗಿತ್ತು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. 

ಈ ಬಗ್ಗೆ ಸ್ಥಳ ತನಿಖೆ ನಡೆಸಿ ಬ್ಯಾನರ್ ತೆರವುಗೊಳಿಸಿದ ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಪುತ್ತೂರು-ನರಿಮೊಗರು ನಿವಾಸಿ ಅಲಂಬರ್ ಎಂಬವರ ಪುತ್ರರಾದ ವಿಶ್ವನಾಥ ಹಾಗೂ ಮಾಧವ ಎಂದು ಹೆಸರಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. 

ಈ ಬಗ್ಗೆ 1. ಪುತ್ತೂರು ನಗರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 37/2023 ಕಲಂ 3 ಕರ್ನಾಟಕ ಬಹಿರಂಗ ಸ್ಥಳ ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ ಅಧಿನಿಯಮ 1981 ರಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಪೇಟೆಯಲ್ಲಿ ನಳಿನ್, ಸದಾನಂದ ಗೌಡ ಹೆಸರಿಲ್ಲಿ ಶ್ರದ್ದಾಂಜಲಿ ಬ್ಯಾನರ್ ಹಾಕಿದ ಪ್ರಕರಣ : ಇಬ್ಬರು ಪೊಲೀಸ್ ವಶ Rating: 5 Reviewed By: karavali Times
Scroll to Top