ಜಕ್ರಿಬೆಟ್ಟು : ಸರಕಾರಿ ಬಸ್ ಧಾವಂತಕ್ಕೆ ಮತ್ತೋರ್ವ ಸ್ಕೂಟರ್ ಸವಾರ ಬಲಿ - Karavali Times ಜಕ್ರಿಬೆಟ್ಟು : ಸರಕಾರಿ ಬಸ್ ಧಾವಂತಕ್ಕೆ ಮತ್ತೋರ್ವ ಸ್ಕೂಟರ್ ಸವಾರ ಬಲಿ - Karavali Times

728x90

14 April 2023

ಜಕ್ರಿಬೆಟ್ಟು : ಸರಕಾರಿ ಬಸ್ ಧಾವಂತಕ್ಕೆ ಮತ್ತೋರ್ವ ಸ್ಕೂಟರ್ ಸವಾರ ಬಲಿ

ಬಂಟ್ವಾಳ, ಎಪ್ರಿಲ್ 15, 2023 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ಬುಧವಾರ ರಾತ್ರಿ ಸರಕಾರಿ ಬಸ್ಸು ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಮಾಸುವ ಮುನ್ನವೇ ಅದೇ ಪರಿಸರದಲ್ಲಿ ಶುಕ್ರವಾರ ಮಧ್ಯಾಹ್ನ ಮತ್ತೊಂದು ಅವಘಡ ಸಂಭವಿಸಿದ್ದು, ಸರಕಾರಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳೀಯ ನಿವಾಸಿ ದಿವಂಗತ ಕೊರಗ ಮೂಲ್ಯ ಎಂಬವರ ಪುತ್ರ ಡೊಂಬಯ್ಯ ಮೂಲ್ಯ (64) ಅವರು ದಾರುಣವಾಗಿ ಮೃತಪಟ್ಟಿದ್ದಾರೆ. 

ಡೊಂಬಯ್ಯ ಅವರು ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಜಕ್ರಿಬೆಟ್ಟು ಕಡೆಯಿಂದ ಬಿ ಸಿ ರೋಡು ಕಡೆಗೆ ಹೂ ತರಲೆಂದು ಬರುತ್ತಿದ್ದ ವೇಳೆ  ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಸರಕಾರಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಂಟ್ವಾಳ ಸಂಚಾರಿ ಠಾಣಾ ಪೆÇಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಬಸ್ ಚಾಲಕ ಕಲ್ಮರುಪ್ಪ ಎಂಬಾತನ ಅಜಾರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎನ್ನಲಾಗಿದ್ದು, ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜಕ್ರಿಬೆಟ್ಟು : ಸರಕಾರಿ ಬಸ್ ಧಾವಂತಕ್ಕೆ ಮತ್ತೋರ್ವ ಸ್ಕೂಟರ್ ಸವಾರ ಬಲಿ Rating: 5 Reviewed By: karavali Times
Scroll to Top