ವಿಧಾನಸಭಾ ಚುನಾವಣೆ ಹಿನ್ನಲೆ : ದ.ಕ. ಜಿಲ್ಲೆಗೆ 4 ಸಿ.ಆರ್.ಪಿ.ಎಫ್. ತುಕಡಿ ಆಗಮನ - Karavali Times ವಿಧಾನಸಭಾ ಚುನಾವಣೆ ಹಿನ್ನಲೆ : ದ.ಕ. ಜಿಲ್ಲೆಗೆ 4 ಸಿ.ಆರ್.ಪಿ.ಎಫ್. ತುಕಡಿ ಆಗಮನ - Karavali Times

728x90

5 April 2023

ವಿಧಾನಸಭಾ ಚುನಾವಣೆ ಹಿನ್ನಲೆ : ದ.ಕ. ಜಿಲ್ಲೆಗೆ 4 ಸಿ.ಆರ್.ಪಿ.ಎಫ್. ತುಕಡಿ ಆಗಮನ

ಮಂಗಳೂರು, ಎಪ್ರಿಲ್ 05, 2023 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಲು ಮೊದಲ ಹಂತದಲ್ಲಿ 4 ಸಿ ಆರ್ ಪಿ ಎಫ್ ತುಕಡಿಗಳು ಜಿಲ್ಲೆಗೆ ಬುಧವಾರ ಆಗಮಿಸಿದೆ. 

ಸಿ ಆರ್ ಪಿ ಎಫ್ ಯೋಧರನ್ನು ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ತುಕಡಿಗಳನ್ನು ಚುನಾವಣಾ ಕರ್ತವ್ಯಕ್ಕೆ ತರಿಸಿಕೊಳ್ಳಲಾಗುವುದು. 

ಈ ಸಿ ಆರ್ ಪಿ ಎಫ್ ತುಕಡಿಗಳು ಚುನಾವಣೆಗೆ ಸಂಬಂಧಿಸಿದಂತೆ ಏರಿಯಾ ಡೋಮಿನೇಷನ್, ಚೆಕ್ ಪೊಸ್ಟ್ ಕರ್ತವ್ಯ, ಸ್ಟ್ರಾಂಗ್ ರೂಮ್ ಭದ್ರತೆ ಕರ್ತವ್ಯ, ಪ್ರಮುಖ ಸ್ಥಳಗಳಲ್ಲಿ ರೂಟ್ ಮಾರ್ಚ್, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸ್ಥಳೀಯ ಪೊಲೀಸರಿಗೆ ಸಹಾಯಕವಾಗಿ ಕರ್ತವ್ಯ ಹಾಗೂ ಇತರ ಚುನಾವಣಾ ವಿಷಯಗಳಲ್ಲಿ ಕರ್ತವ್ಯ ನಿರ್ವಹಿಸಲಿವೆ ಎಂದು ಜಿಲ್ಲಾ ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವಿಧಾನಸಭಾ ಚುನಾವಣೆ ಹಿನ್ನಲೆ : ದ.ಕ. ಜಿಲ್ಲೆಗೆ 4 ಸಿ.ಆರ್.ಪಿ.ಎಫ್. ತುಕಡಿ ಆಗಮನ Rating: 5 Reviewed By: karavali Times
Scroll to Top