ಪುತ್ತೂರು (ಕರಾವಳಿ ಟೈಮ್ಸ್) : ತಾಲೂಕಿನ ಕಬಕ-ವಿದ್ಯಾಪುರ ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ (ಮಾ 6) ಕಬಕ ಜಂಕ್ಷನ್ ಬಗ್ಗುಮೂಲೆ ಮೈದಾನದ ಮರ್ಹೂಂ ಎಂ.ಎ. ಖಾಸಿಂ ಉಸ್ತಾದ್ ವೇದಿಕೆಯಲ್ಲಿ ನಡೆದ ಧಾರ್ಮಿಕ ಮತ ಪ್ರವಚನ ಹಾಗೂ ಆಹ್ವಾನಿತ 12 ತಂಡಗಳ ದಫ್ ಸ್ಪರ್ದಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕಟಪಾಡಿ-ಮಣಿಪುರ ಖಲಂದರ್ ಷಾ ದಫ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕಾರ್ಯಕ್ರಮ ಉದ್ಘಾಟಿಸಿದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ. ಉಸ್ತಾದ್ ಮಾತನಾಡಿ ಇತರರ ಕಷ್ಟಗಳಿಗೆ ನೆರವಾಗುವಂತಹ ಕಾರುಣ್ಯ ಕಾರ್ಯಕ್ರಮಗಳು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ, ಪ್ರತಿಯೋರ್ವರೂ ನಾಡಿನಲ್ಲಿ ಶಾಂತಿ-ಸೌಹಾರ್ದತೆಯನ್ನು ಕಾಪಾಡಿಕೊಂಡು ಜನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ ಗೌರವಾಧ್ಯಕ್ಷ ಸಯ್ಯಿದ್ ಅಲ್-ಹಾದಿ ಯಹ್ಯಾ ತಂಙಳ್ ಪೆÇೀಳ್ಯ ಅಧ್ಯಕ್ಷತೆ ವಹಿಸಿದ್ದರು. ಕಬಕ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ.ಎನ್. ಮುಹಮ್ಮದ್ ಮುಸ್ಲಿಯಾರ್ ದುಆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಶೇಖ್ ಮುಹಮ್ಮದ್ ಇರ್ಫಾನಿ, ಮೂಸಲ್ ಫೈಝಿ ಪಾಟ್ರಕೋಡಿ, ಬೀಟಿಗೆ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅಲ್-ಹೈತಮಿ, ಬೆಳ್ಳಾರೆ ಮಸೀದಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ರಶೀದ್ ಹಾಜಿ ಪರ್ಲಡ್ಕ, ಮದ್ರಸ ಮ್ಯಾನೇಜ್ಮೆಂಟ್ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ರಫೀಕ್ ಹಾಜಿ ನೇರಳಕಟ್ಟೆ, ಕಲ್ಲೇಗ ಎಸ್.ಕೆ.ಎಸ್.ಎಸ್.ಎಫ್. ಅದ್ಯಕ್ಷ ಝಾಕಿರ್ ಹನೀಫ್ ಹಾಜಿ ಉದಯ, ಪರ್ತಿಪ್ಪಾಡಿ ಜುಮಾ ಮಸೀದಿ ಅದ್ಯಕ್ಷ ಹಕೀಂ ಪರ್ತಿಪ್ಪಾಡಿ, ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಕಬಕ ಯೂತ್ ಫ್ರೆಂಡ್ಸ್ ಅದ್ಯಕ್ಷ ಅಬ್ದುಲ್ ರಹಿಮಾನ್, ಕಬಕ ಗ್ರಾಮ ಪಂಚಾಯತ್ ಸದಸ್ಯ ಕೆ. ಶಾಬ, ಕಬಕ ಮಸೀದಿ ಕಾರ್ಯದರ್ಶಿ ಉಮರ್ ಕರಾವಳಿ, ಉಪಾಧ್ಯಕ್ಷ ಸಿತಾರ್ ಇಬ್ರಾಹಿಂ, ಎಸ್.ಕೆ.ಎಸ್.ಎಸ್.ಎಫ್. ದ.ಕ. ಜಿಲ್ಲಾ ಕೌನ್ಸಿಲರ್ ಅಶ್ರಫ್ ಕಬಕ, ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಪುತ್ತೂರು ಕಾರ್ಯದರ್ಶಿ ಆಸಿಫ್ ಕಬಕ, ಕೆ. ಹಸೈನಾರ್ ಸಿಟಿ ಬಜಾರ್ ಪುತ್ತೂರು, ಹಾಜಿ ಯು.ಎಚ್. ಅಬೂಬಕ್ಕರ್ ಮಂಗಳ ಬೆಳ್ಳಾರೆ, ಹಮೀದ್ ಹಾಜಿ ಸುಳ್ಯ, ಡಾ. ಇ.ಕೆ.ಎ. ಸಿದ್ದೀಕ್ ಅಡ್ಡೂರು, ರಫೀಕ್ ಅಹ್ಮದ್ ಬ್ರೈಟ್ ಪೆÇೀಳ್ಯ, ಅಬ್ದುಲ್ ಖಾದರ್ ಸಾಗರ್ ಪೆÇೀಳ್ಯ, ಅಬೂಬಕ್ಕರ್ ಮೂಳಾರ್, ಅಬೂಬಕ್ಕರ್ ಸಾರ್ ಕಬಕ, ಮಧುರಾ ಇಬ್ರಾಹಿಂ ಕಬಕ, ಹಸೈನಾರ್ ಹಾಜಿ ಅಲ್ ಮಜ್ಮಾ ಕೊಡಿಪ್ಪಾಡಿ, ಫಲುಲ್ ಮಾಸ್ಟರ್ ವಿದ್ಯಾಪುರ, ಇಸ್ಹಾಕ್ ವಿದ್ಯಾಪುರ-ಕಬಕ, ಕೆ.ಎಸ್. ಅರ್ಶದ್ ಕಬಕ, ರಿಯಾಝ್ ಸೋನಿ ಮೊದಲಾದವರು ಬಾಗವಹಿಸಿದ್ದರು.
ಇದೇ ವೇಳೆ ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಮುಸ್ಲಿಯಾರ್ ಅಲ್-ಖಾಸಿಮಿ ಬಂಬ್ರಾಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಸಮಸ್ತ ಹನೀಫೀ ಉಲಮಾ ಒಕ್ಕೂಟ ಅದ್ಯಕ್ಷ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ, ಸಾಲ್ಮರ ಜುಮಾ ಮಸೀದಿ ಖತೀಬ್ ಪಿ.ಎಂ. ಉಮರ್ ದಾರಿಮಿ ಪ್ರಸ್ತಾವನೆಗೈದರು. ಸಯ್ಯಿದ್ ಅಲ್ ಹಾದಿ ಮುಹೀನುದ್ದೀನ್ ತಂಙಲ್ ಸಾಲ್ಮರ ಕಿರಾಅತ್ ಪಠಿಸಿದರು, ಅಲ್-ಇಸ್ಲಾಹ್ ಸಾಹಿತ್ಯ ಸಮಾಜದ ಅದ್ಯಕ್ಷ ಜಮೀರುದ್ದೀನ್ ವಂದಿಸಿದರು. ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅದ್ಯಕ್ಷ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment