ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನವೈರಸ್ ಹರಡುವಿಕೆ ತಡೆಯಲು ಹೇರಲಾಗಿರುವ ರಾಷ್ಟ್ರವ್ಯಾಪಿ ಲಾಕ್ಡೌನ್ ಡೋಂಟ್ ಕೇರ್ ಮಾಡಿ ಹೊರಗಡೆ ಅನಾವಶ್ಯಕವಾಗಿ ತಿರುಗಾಡಿದ 2,000ಕ್ಕೂ ಹೆಚ್ಚು ವಾಹನಗಳನ್ನು ನಗರ ಬೆಂಗಳೂರು ಪೆÇಲೀಸರು ಸೋಮವಾರ ವಶಪಡಿಸಿಕೊಳ್ಳುವ ಮೂಲಕ ವಾಹನ ಸವಾರರಿಗೆ ಭರ್ಜರಿ ಬಿಸಿ ಮುಟ್ಟಿಸಿದ್ದಾರೆ.
ಕೊರೊನವೈರಸ್ ಹರಡುವಿಕೆ ತಡೆಯಲು ಹೇರಲಾಗಿರುವ ಲಾಕ್ಡೌನ್ ನಿಯಮ ಉಲ್ಲಂಘಿಸಿ ಬೀದಿಗಿಳಿಯುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಗರ ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್ ಪೆÇಲೀಸರಿಗೆ ಸೂಚಿಸಿದ್ದರು.
ಮೂತ್ರಪಿಂಡ ರೋಗಿಗಳು ಸೇರಿದಂತೆ ವೈದ್ಯಕೀಯ ನೆರವು ಅಗತ್ಯವಿರುವ ಜನರಿಗೆ ಸಹಾಯ ನೀಡುವುದು ಸೇರಿದಂತೆ 16 ನಿರ್ದೇಶನಗಳನ್ನು ಪೆÇಲೀಸ್ ಆಯುಕ್ತರುವ ಹೊರಡಿಸಿದ್ದಾರೆ. ಜನರನ್ನು ಹೆದರಿಸಲು ಲಾಠಿಗಳನ್ನು ಬಳಸದಂತೆಯೂ ಪೆÇಲೀಸ್ ಆಯುಕ್ತರು ಪೆÇಲೀಸರಿಗೆ ಸೂಚಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಲಾಕ್ಡೌನ್ ನಿಯಮ ಉಲ್ಲಂಘಿಸುವವರೊಂದಿಗೆ ಮೌಖಿಕವಾಗಿ ಮಾತನಾಡಿ ಪರಿಸ್ಥಿತಿ ನಿಭಾಯಿಸುವಂತೆ ಅವರು ಸೂಚಿಸಿದ್ದಾರೆ.
0 comments:
Post a Comment